ತನ್ನ ಪಕ್ಷದೊಂದಿಗೆ ಸಮಾಲೋಚನೆ ನಡೆಸದೆ ಪಶ್ಚಿಮ ಬಂಗಾಳ ಸರಕಾರವು ಏಕ ಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದೆ ಎಂದು ದೂರಿರುವ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ಸಿಂಗೂರು ಕುರಿತು ಇನ್ನು ಮಾತುಕತೆ ಇಲ್ಲ ಎಂದಿದ್ದಾರೆ.
ಮುಖ್ಯಮಂತ್ರಿಗಳು ನಮ್ಮೊಂದಿಗೆ ಸಮಾಲೋಚನೆ ನಡೆಸದೆ ಎಲ್ಲ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ, ಅವರು ನಮ್ಮೊಂದಿಗಿನ ಒಪ್ಪಂದವನ್ನು ಮುರಿದಿದ್ದಾರೆ ಎಂದು ವರದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನುಡಿದರು.
ಪರಿಹಾರ ಪ್ಯಾಕೇಜು ತನ್ನ ಪಕ್ಷ ಮತ್ತು ಸರಕಾರದ ನಡುವೆ ನಡೆದಿರುವ ಒಪ್ಪಂದವನ್ನು ಮುರಿದಿದೆ ಎಂದು ಹೇಳಿರುವ ಅವರು, ಸೆಪ್ಟೆಂಬರ್ 16ರಿಂದ ಸಿಂಗೂರ್ ಚಲೋ ಜಾಥ ಮತ್ತು, ಸೆಪ್ಟೆಂಬರ್ 19ರಿಂದ ಮತ್ತೆ ಚಳುವಳಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
|