ಪ್ರಸಕ್ತ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮಗಳು ಶಕ್ತವಾಗಿರುವ ಹಿನ್ನೆಲೆಯಲ್ಲಿ, ಭಾರತೀಯ ಐಟಿ ಉದ್ಯಮಗಳಲ್ಲಿ ಉದ್ಯೋಗ ಕಡಿತವಿಲ್ಲ ಎಂಬುದಾಗಿ ಇನ್ಫೋಸಿಸ್ ಟೆಕ್ನಾಲಜಿ ಉಪಾಧ್ಯಕ್ಷ ನಂದನ್ ನಿಲೇಕಣಿ ಸ್ಪಷ್ಟಪಡಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಡಿಪಾಯವು ಭದ್ರವಾಗಿದ್ದು, ಪಿಂಕ್ ಸ್ಲಿಪ್ ನೀಡುವ ಸಂದರ್ಭ ಒದಗಿ ಬರುವುದಿಲ್ಲ ಎಂದು ನಿಲೇಕಣಿ ತಿಳಿಸಿದ್ದಾರೆ.
ಇನ್ಫೋಸಿಸ್ ಅಭಿವೃದ್ಧಿಯನ್ನು ಕಡಿಮೆಗೊಳಿಸಿದರೂ, ಶೇ.13-15ರಷ್ಟು ಉನ್ನತ ಮಟ್ಟಕ್ಕೆ ತಲುಪಿದೆ ಎಂದು ಅವರು ಸೂಚಿಸಿದ್ದಾರೆ
ಜಾಗತಿಕ ಹಣಕಾಸು ಬಿಕ್ಕಟ್ಟು ಅತ್ಯಂತ ಕ್ಲಿಷ್ಟಕರವಾಗಿದ್ದು, ಅದನ್ನು ಎದುರಿಸುವಲ್ಲಿ ಭಾರತೀಯ ಸರಕಾರವು ಉತ್ತಮ ಪ್ರಯತ್ನಗಳನ್ನೇ ನಡೆಸಿದೆ. ಅಲ್ಲದೆ, ಆರ್ಥಿಕ ಕುಸಿತದ ಹೊರತಾಗಿಯೂ ಭಾರತವು ಅಭಿವೃದ್ಧಿ ಸಾಧಿಸಲಿದೆ ಎಂದು ಮನಮೋಹನ್ ಸಿಂಗ್ ಅವರೂ ಹೇಳಿದ್ದಾರೆ ಎಂದು ನಿಲೇಕಣಿ ಹೇಳಿದರು. |