ಮಾರುಕಟ್ಟೆಯಲ್ಲಿನ ಕರಡಿಕುಣಿತದ ತೀವ್ರತೆಯನ್ನು ತಗ್ಗಿಸುವ ಪ್ರಯತ್ನವೆಂಬಂತೆ, ಸಾಲ ನೀತಿ ಕುರಿತಾದ ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಕೈಗೊಂಡ ನಿರ್ಧಾರವು ಅಂತಿಮವಲ್ಲ. ಅಲ್ಲದೆ, ಅಗತ್ಯವಿದ್ದಲ್ಲಿ, ಕೇಂದ್ರ ಬ್ಯಾಂಕ್ ಮಾರುಕಟ್ಟೆಯಲ್ಲಿ ನಗದು ಹರಿವನ್ನು ಪೂರೈಸಲಿದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.ಇದು ಆರ್ಬಿಐನ ಕೊನೆಯ ನಿರ್ಧಾರವಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ ಮಾರುಕಟ್ಟೆಯ ಪರಿಸ್ಥಿತಿಯನ್ನು ಆಧರಿಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.ಮಾರುಕಟ್ಟೆಯು ತನ್ನ ಇಳಿಮುಖ ಪ್ರವೃತ್ತಿಯಿಂದ ಹಿಂದೆ ಸರಿದ ತಕ್ಷಣದಲ್ಲೇ ಸರಕಾರವು ಅಭಿವೃದ್ಧಿ ಪಥಕ್ಕೆ ಹಿಂತಿರುಗಲಿದೆ ಎಂದು ಹಣಕಾಸು ಸಚಿವರು ಹೂಡಿಕೆದಾರರಿಗೆ ಭರವಸೆ ನೀಡಿದ್ದಾರೆ.ಭಾರತದ ಹಣಕಾಸು ಸ್ಥಿರತೆಯನ್ನು ನಿರ್ವಹಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಚಿದಂಬರಂ ಇದೇ ವೇಳೆ ಅಭಿಪ್ರಾಯಪಟ್ಟರು. |
|