ಭಾರತೀಯ ಕಂಪನಿಗಳಲ್ಲಿನ ಉದ್ಯೋಗ ಕಡಿತದ ಕುರಿತಂತೆ ಉದ್ಯಮ ಮಂಡಳಿ ಅಸೋಚಾಂ ನೀಡಿರುವ ವರದಿಗಳ ವಿರುದ್ಧ ಸರಕಾರವು ತೀವ್ರ ಆಕ್ರೋಶಗೊಂಡಿದ್ದು, ಈ ಹೇಳಿಕೆಗಳು ಬೇಜಾವಾಬ್ಧಾರಿಯುಕ್ತ ಮತ್ತು ಅಸಂಬದ್ಧ ಎಂದು ಹೇಳಿದೆ.
ಇದೊಂದು ಬೇಜವಾಬ್ಧಾರಿಯುತ ಹೇಳಿಕೆಯಾಗಿದೆ ಎಂದು ಕೇಂದ್ರ ವಿದ್ಯುತ್ ಸಚಿವಾಲಯದ ರಾಜ್ಯ ಸಚಿವ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಭಾರತೀಯ ಕಂಪನಿಗಳು, ಐಟಿ, ವಿಮಾನಯಾನ, ಸ್ಟೀಲ್, ಹಣಕಾಸು ಸೇವೆ, ಸ್ಥಿರಾಸ್ತಿ, ಸಿಮೆಂಟ್ ಮುಂತಾದ ಕ್ಷೇತ್ರಗಳಲ್ಲಿ ಶೇ.25-30ರಷ್ಟು ನೌಕರರಿಗೆ ಪಿಂಕ್ ಸ್ಲಿಪ್ ನೀಡಲು ಸಿದ್ಧವಾಗಿದೆ ಎಂಬುದಾಗಿ ಉದ್ಯಮ ಮಂಡಳಿ ಅಸೋಚಾಂ ಬುಧವಾರ ವರದಿ ನೀಡಿತ್ತು.
ಕೈಗಾರಿಕಾ ಸಂಸ್ಥೆಗಳು ಇಂತಹ ಆತಂಕಕಾರಿ ವರದಿಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಜೈರಾಂ ಒತ್ತಾಯಿಸಿದ್ದಾರೆ.
ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರೂ ಅಸೋಚಾಂನ ಈ ಹೇಳಿಕೆಯನ್ನು ವಿರೋಧಿಸಿದ್ದು, ಇದು ಹೆಚ್ಚುವರಿ ಉದ್ಯೋಗ ನಿರ್ಮಾಣದ ಮೇಲೆ ಪ್ರಭಾವ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. |