ವಿಶ್ವದ ಅತಿ ದೊಡ್ಡ ಸ್ಟೀಲ್ ನಿರ್ಮಾಣ ಸಂಸ್ಥೆ ಏರ್ಸಲರ್ ಮಿತ್ತಲ್ ಪಶ್ಚಿಮ ಬಂಗಾಲದ ರಾಜರಾತ್ನಲ್ಲಿ ತನ್ನ ಕೇಂದ್ರ ಕಚೇರಿಯನ್ನು ನಿರ್ಮಿಸಲು ಆಸಕ್ತಿ ಹೊಂದಿರುವುದಾಗಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ತಿಳಿಸಿದ್ದಾರೆ.
ಈ ಸಂಬಂಧ ಜಮೀನು ನೀಡುವಂತೆ ಶತಕೋಟ್ಯಾಧಿಪತಿ ಎಲ್.ಎನ್.ಮಿತ್ತಲ್ ಪಶ್ಚಿಮ ಬಂಗಾಲ ಸರಕಾರಕ್ಕೆ ಮನವಿ ಮಾಡಿರುವುದಾಗಿ ಭಟ್ಟಾಟಾರ್ಯ ಹೇಳಿದ್ದಾರೆ.
ಇದಲ್ಲದೆ, ಇತರ ಕಂಪನಿಗಳಾದ ಏರ್ಟೆಲ್, ಐಸಿಐಸಿಐ ಬ್ಯಾಂಕ್ ಮುಂತಾದವುಗಳೂ ರಾಜರಾತ್ನಲ್ಲಿ ಜಮೀನು ನೀಡುವಂತೆ ಸರಕಾರಕ್ಕೆ ಮನವಿ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಜಮೀನು ಬೆಲೆಯು ಏರುತ್ತಿದ್ದು, ರಾಜರಾತ್ನಲ್ಲಿ ಪ್ರತಿ ಎಕರೆಯ ಬೆಲೆಯು ಏಳು ಕೋಟಿ ರೂಪಾಯಿಗಳಾಗಿವೆ ಎಂದು ಅವರು ಸೂಚಿಸಿದ್ದಾರೆ. |