ಜಾಗತಿಕ ಆರ್ಥಿಕ ಕುಸಿತ ಎಲ್ಲ ಕ್ಷೇತ್ರಗಳ ಆರ್ಥಿಕತೆಗೆ ಧಕ್ಕೆ ತಂದಿದ್ದರೂ ಮುಂಬರುವ 6 ರಿಂದ 9 ತಿಂಗಳಲ್ಲಿ ಮರಳಿ ಸುಸ್ಥಿತಿಗೆ ಬರಲಿವೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ದೇಶದ ಪ್ರತಿಯೊಂದು ಆರ್ಥಿಕ ವಹಿವಾಟಿನ ಕ್ಷೇತ್ರಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು ಕಂಪೆನಿಗಳು ಭಾರಿ ಪ್ರಮಾಣದ ತೊಂದರೆಯನ್ನು ಎದುರಿಸುತ್ತಿವೆ. ಆರ್ಥಿಕ ಕುಸಿತ ನಿವಾರಣೆಗೆ ತೆಗೆದುಕೊಂಡ ಕ್ರಮಗಳು ಮುಂಬರುವ ಆರರಿಂದ ಒಂಬತ್ತು ತಿಂಗಳ ಅವಧಿಯಲ್ಲಿ ಫಲ ನೀಡಲಿವೆ ಎಂದು ಸಚಿವ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಸತತ ನಾಲ್ಕು ವರ್ಷಗಳಿಂದ ಶೇ.9 ರ ಅಭಿವೃದ್ಧಿ ದರದಲ್ಲಿ ಸಾಗುತ್ತಿದೆ. ಅನೇಕ ಮೂಲಗಳ ಪ್ರಕಾರ ಜಾಗತಿಕ ಆರ್ಥಿಕ ಕುಸಿತದಿಂದ ದೇಶದ ಆರ್ಥಿಕತೆಯ ಅಭಿವೃದ್ಧಿ ದರದ ಮೇಲೆ ಶೇ.1 ರಿಂದ ಶೇ.2 ರಷ್ಟು ಮಾತ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಅಭಿವೃದ್ಧಿ ದರದ ಏರಿಕೆ ಅಥವಾ ಇಳಿಕೆಯನ್ನು ಪರಿಶೀಲನೆ ಕೇಂದ್ರ ಸರಕಾರಕ್ಕೆ ಅಗತ್ಯವಿಲ್ಲ . ಜಗತ್ತಿನಲ್ಲಿ ಬೃಹತ್ ರಾಷ್ಟ್ರವಾದ ಚೀನಾವನ್ನು ಹೊರತುಪಡಿಸಿದರೆ ಭಾರತ ಮಾತ್ರ ಶೇ.7 ರಿಂದ ಶೇ.8 ರಷ್ಟು ಅಭಿವೃದ್ಧಿ ದರವನ್ನು ಹೊಂದಿದೆ ಎಂದು ಸಚಿವ ಚಿದಂಬರಂ ತಿಳಿಸಿದ್ದಾರೆ. |