ಭಾರತದಲ್ಲಿ ಮಾಹಿತ ತಂತ್ರಜ್ಞಾನ ಕ್ಷೇತ್ರ ವೇಗವಾಗಿ ಬೆಳೆಯುವ ಹಂತದಲ್ಲಿದ್ದು, ತಂತ್ರಜ್ಞಾನದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನ ಮಂತ್ರಿಯವರ ತಂತ್ರಜ್ಞಾನ ಸಲಹಾ ಸಮಿತಿಯ ಸದಸ್ಯ ಕಿರಣ್ ಕಾರ್ನಿಕ್ ಹೇಳಿದ್ದಾರೆ.
ಇಂದಿನ ತಂತ್ರಜ್ಞಾನ ಜನಜೀವನ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಯನ್ನು ತಂದಿದೆ. ಮುಂಬೈಯಲ್ಲಿದ್ದ ಮಾಲೀಕ ಸಿಂಗಾಪೂರ್ದಲ್ಲಿರುವ ಕೆಮಿಕಲ್ ಘಟಕವನ್ನು ನಿಯಂತ್ರಿಸುತ್ತಾನೆ. ಇಂತಹ ತಂತ್ರಜ್ಞಾನಗಳಿಂದ ಅಸಾಧ್ಯವಾಗಿರುವುದನ್ನು ಸಾಧ್ಯವಾಗಿಸಬಹುದು ಎಂದು ಕಾರ್ನಿಕ್ ಹೇಳಿದ್ದಾರೆ.
ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಬೆಳೆಯುವ ಹಂತದಲ್ಲಿದ್ದು, ತಂತ್ರಜ್ಞಾನದ ಸಹಾಯದಿಂದ ಗ್ರಾಮೀಣ ಬಿಪಿಒ ಸೇರಿದಂತೆ ಹೊಸ ಹೊಸ ರೀತಿಯ ಕಾರ್ಯಗಳನ್ನು ಅವಿಷ್ಕರಿಸಬೇಕಾಗಿದೆ ಎಂದು ಕಾರ್ನಿಕ್ ಐಐಎಂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಅಮೆರಿಕದ ಅಧ್ಯಕ್ಷರಾಗಿ ಬರಾಕ್ ಒಬಾಮಾ ಅಧಿಕಾರ ಸ್ವೀಕಾರದ ನಂತರ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಆಡ್ಡಿಗಳು ಎದುರಾಗಲಿವೆ ಎನ್ನುವ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಕಾರ್ನಿಕ್, ಭಾರತದಲ್ಲಿ ಸ್ಪರ್ಧಾತ್ಮಕ ವಹಿವಾಟಿಗೆ ಉತ್ತಮ ಅವಕಾಶಗಳಿವೆ ಎಂದಾದಲ್ಲಿ ಭಾರತದ ಜೊತೆ ಅಮೆರಿಕ ವಹಿವಾಟು ನಡೆಸುತ್ತದೆ ಎಂದು ನುಡಿದರು. |