ಭಯೋತ್ಪಾದಕರು ಹತರಾದ ಎರಡು ದಿನಗಳ ನಂತರ ಭದ್ರತಾ ಪಡೆಗಳು ತಾಜ್ ಮಹಲ್ ಹೊಟೇಲನ್ನು ನಮ್ಮ ಸುಪರ್ದಿಗೆ ಒಪ್ಪಿಸಿವೆ ಎಂದು ತಾಜ್ ಹೊಟೇಲುಗಳ ಸಮೂಹ ಇಂದು ತಿಳಿಸಿದೆ.
"ಡಿಸೆಂಬರ್ ಒಂದರಂದು ತಾಜ್ ಮಹಲ್ ಪಾಲೇಸ್ ಮತ್ತು ಗೋಪುರಗಳನ್ನು ತಾಜ್ ಸಮೂಹದ ಕೈಗೆ ಭದ್ರತಾ ಪಡೆಗಳು ಹಸ್ತಾಂತರಿಸಿವೆ" ಎಂದು ತಾಜ್ ಹೊಟೇಲುಗಳ ಸಮೂಹ ಪತ್ರಿಕಾ ಹೇಳಿಕೆಯಲ್ಲಿ ಹೇಳಿದೆ.
ಭದ್ರತೆ ಮತ್ತು ತನಿಖೆಯ ದೃಷ್ಟಿಯಿಂದ ಹೊಟೇಲಿನ ಯಾವುದೇ ಭಾಗಗಳನ್ನು ಉಪಯೋಗ ಮಾಡುವಂತಿಲ್ಲ. ಹೊಟೇಲಿಗೆ ಬಿಗಿ ಬಂದೋಬಸ್ತಿನ ಕಾವಲು ಹಾಕಲಾಗಿದ್ದು, ಪ್ರವೇಶ ನಿಷೇಧಕ್ಕೊಳಪಟ್ಟಿದೆ. ವಿಶೇಷ ವ್ಯಕ್ತಿಗಳಿಗೆ ಮಾತ್ರ ಹೊಟೇಲ್ ಕಟ್ಟಡವನ್ನು ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ.
ದೇಶದ ಮುಕುಟದಂತಿದ್ದ ಐಷಾರಾಮಿ ಹೊಟೇಲಿಗೆ ಉಗ್ರರು ದಾಳಿ ಮಾಡಿದ ನಂತರ ಅಲ್ಲಿನ ರೂಪುರೇಷೆಗಳೇ ಬದಲಾಗಿವೆ. ಸ್ಮಶಾನದಂತಾಗಿರುವ ಹೊಟೇಲು ದುರಸ್ತಿಗೊಳಗಾಗಲು ಕೂಡ ಕೆಲವು ದಿನ ಕಾಯಬೇಕಾದ ಸ್ಥಿತಿಯಿದೆ. ಸದ್ಯ ಕೆಲವು ದಿನ ತನಿಖೆಯ ಕಾರಣದಿಂದ ಪರಿಸರ ಶುಚಿಗೊಳಿಸುವುದು ಕೂಡ ದೂರದ ಮಾತಾಗಿದ್ದು, ವರ್ಷಗಳ ವರೆಗೆ ಹೊಟೇಲು ತೆರೆಯುವುದು ಅಸಾಧ್ಯ.
|