ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ :ಸ್ವತಂತ್ರ ನಿರ್ದೇಶಕ ರಾಜೀನಾಮೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ :ಸ್ವತಂತ್ರ ನಿರ್ದೇಶಕ ರಾಜೀನಾಮೆ?
ಸತ್ಯಂ ಕಂಪ್ಯೂಟರ್ಸ್‌ನ ನಿರ್ದೇಶಕರ ಸಭೆ ಮುಂದಿನ ವಾರದಲ್ಲಿರುವಂತೆಯೇ ಸ್ವತಂತ್ರ ನಿರ್ವಹಣೆಯ ನಿರ್ದೇಶಕರೊಬ್ಬರು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ವತಂತ್ರ ನಿರ್ದೇಶಕರ ರಾಜೀನಾಮೆ ಕುರಿತಂತೆ ಸತ್ಯಂ ವಕ್ತಾರರನ್ನು ಸಂಪರ್ಕಿಸಿದಾಗ ಮಾಹಿತಿ ನೀಡಲು ನಿರಾಕರಿಸಿದ್ದು, ರಾಜೀನಾಮೆ ನೀಡಿದ ಮಂಡಳಿಯ ಸ್ವತಂತ್ರ ನಿರ್ದೇಶಕ ಮಂಗಲಂ ಶ್ರೀನಿವಾಸನ್ ಕೂಡಾ ಲಭ್ಯವಾಗಿಲ್ಲವೆಂದು ಮಾಧ್ಯಮಗಳ ಮೂಲಗಳು ಪ್ರಕಟಿಸಿವೆ.

ಕಳೆದ ತಿಂಗಳು ಸತ್ಯಂ ಕಂಪ್ಯೂಟರ್ಸ್ ಮುಖ್ಯಸ್ಥ ಬಿ.ರಾಮಲಿಂಗ ರಾಜು ಸಂಚಾಲಿತ ಎರಡು ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿತ್ತು. ಆದರೆ ಶೇರುದಾರರ ಒತ್ತಡದಿಂದಾಗಿ ಒಪ್ಪಂದವನ್ನು ಕೈ ಬಿಡುವ ಅನಿವಾರ್ಯ ಸ್ಥಿತಿ ಎದುರಾಗಿ ಒಪ್ಪಂದವನ್ನು ರದ್ದುಗೊಳಿಸಲಾಗಿತ್ತು.

ಸಂತ್ಯ ಕಂಪ್ಯೂಟರ್ಸ್ ಅಡಳಿತ ಮಂಡಳಿಯಲ್ಲಿ ಇಬ್ಬರು ಸ್ವತಂತ್ರ ನಿರ್ದೇಶಕರಿದ್ದು, ಮೆಟಾಸ್ ಪ್ರಾಪರ್ಟಿಸ್ ಮತ್ತು ಮೆಟಾಸ್ ಇನ್‌ಫ್ರಾಸ್ಟ್ರಕ್ಚರ್‌ ಖರೀದಿಗೆ ಸಂಬಂಧಿಸಿದಂತೆ ಎದುರಾದ ವಿವಾದಗಳಿಂದಾಗಿ ಶ್ರೀನಿವಾಸನ್ ರಾಜೀನಾಮೆ ನೀಡಿರಬಹುದು ಎಂದು ಬಲ್ಲ ಮೂಲಗಳು ವರದಿ ಮಾಡಿವೆ.

ಅಡಳಿತ ಮಂಡಳಿಯ ನಿರ್ದೇಶಕರ ಸಭೆ ಒಂದೆರಡು ದಿನಗಳಿರುವಂತೆ, ಮತ್ತೊಬ್ಬ ಸ್ವತಂತ್ರ ನಿರ್ದೇಶಕರು ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಕ್ಷ್ಮಿ ಮಿತ್ತಲ್‌ಗೆ ನಷ್ಟದಲ್ಲೂ ಮೊದಲ ಸ್ಥಾನ
ಆರ್‌ಬಿಐನಿಂದ ರೆಪೊ,ರಿವರ್ಸ್ ರೆಪೊ ದರ ಕಡಿತ
ಜೆಟ್‌, ಕಿಂಗ್‌ಫಿಶರ್‌ನಿಂದ ಪ್ರಯಾಣ ದರ ಕಡಿತ
ಚಿನ್ನವಾದ 'ಚಿನ್ನದ ದರ'
ಹುಂಡೈ: ಉತ್ಪಾದನೆ ಇಳಿಕೆ, ದರ ಏರಿಕೆ ಸಂಭವ
ಮಾರುತಿ: ಹೊಸ ಕಾರುಗಳು ಯುರೋಪಿಗೆ ರಫ್ತು