ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ತೈಲ ಸಂಸ್ಥೆಗಳ 55 ಸಾವಿರ ಅಧಿಕಾರಿಗಳು ಮುಷ್ಕರವನ್ನು ಆರಂಭಿಸಿದ್ದರಿಂದ ಅನಿಲ ಸರಬರಾಜು ಹಾಗೂ ವಿಮಾನಯಾನ ಕ್ಷೇತ್ರಗಳಿಗೆ ತೊಂದರೆಯಾಗಿದೆ ಎಂದು ಮೂಲಗಳು ತಿಳಿಸಿವೆ.ಬುಧವಾರದಿಂದ ಮುಷ್ಕರವನ್ನು ಆರಂಭಿಸಿದ್ದು,ಎಚ್ಪಿಸಿಎಲ್ ಹೊರತುಪಡಿಸಿ ಉಳಿದ ಕಂಪೆನಿಗಳು ಮುಷ್ಕರದಲ್ಲಿ ಪಾಲ್ಗೊಂಡಿವೆ ಎಂದು ತೈಲ ಕ್ಷೇತ್ರದ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಅಮಿತ್ ಕುಮಾರ್ ಹೇಳಿದ್ದಾರೆ. ತೈಲ ಸಂಸ್ಥೆ ಅಧಿಕಾರಿಗಳ ಪ್ರತಿಭಟನೆಯಿಂದಾಗಿ ದೇಶದಾದ್ಯಂತ ಅನಿಲ ಸರಬರಾಜು ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ತೈಲ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಒಎನ್ಜಿಸಿಯಿಂದ ಅನಿಲ ಸರಬರಾಜು ಸ್ಥಗಿತಗೊಂಡಿದ್ದರಿಂದ ಪೈಪ್ಲೈನ್ಗಳನ್ನು ಮುಚ್ಚಬೇಕಾಗಿದೆ ಎಂದು ತೈಲ ಸರಬರಾಜು ಕಂಪೆನಿಯಾದ ಗೇಲ್ ಮುಖ್ಯಸ್ಥ ಯು.ಡಿ ಚೌಬೆ ಹೇಳಿದ್ದಾರೆ. |