ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ಹಗರಣ ಎಸ್‌ಎಫ್‌ಐಒಗೆ ಶಿಫಾರಸು: ಗುಪ್ತಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ಹಗರಣ ಎಸ್‌ಎಫ್‌ಐಒಗೆ ಶಿಫಾರಸು: ಗುಪ್ತಾ
ಸತ್ಯಂ ಕಂಪ್ಯೂಟರ್ಸ್ ಹಗರಣದ ಮಾಹಿತಿಗಳ ಬಗ್ಗೆ ತನಿಖೆ ನಡೆಸಿ ಮಾಹಿತಿಗಳು ನಿಜವೆಂದು ಸಾಬೀತಾದಲ್ಲಿ ಗಂಭೀರ ವಂಚನೆ ತನಿಖಾ ಕಚೇರಿ(ಎಸ್ಎಫ್ಐಒ)ಯ ಮೂಲಕ ಸರಕಾರ ಸೂಕ್ತ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವ ಪಿ.ಸಿ.ಗುಪ್ತಾ ಹೇಳಿದ್ದಾರೆ.

ತನಿಖೆಯಲ್ಲಿ ಸತ್ಯಂ ಹಗರಣದ ಮಾಹಿತಿಗಳ ಬಗ್ಗೆ ಪರಿಶೀಲನೆ ನಡೆಸಿದ ನಂತರ ಪ್ರಕರಣವನ್ನು ಗಂಭೀರ ವಂಚನೆ ತನಿಖಾ ಕಚೇರಿಗೆ ಶಿಫಾರಸು ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯಲ್ಲಿ ಆರ್ಥಿಕ ಅವ್ಯವಹಾರಗಳು ತನಿಖೆಯಲ್ಲಿ ಸತ್ಯವೆಂದು ಕಂಡುಬಂದಲ್ಲಿ ಕಾನೂನಿನಡಿಯಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಸಚಿವರು ಕಿಡಿಕಾರಿದ್ದಾರೆ.

ಕಾರ್ಪೋರೇಟ್ ಸಚಿವಾಲಯ ಶೇರುಪೇಟೆ ನಿಯಂತ್ರಕ ಸಂಸ್ಥೆಯಾದ ಸೆಬಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಹಕಾರ ಸಮನ್ವಯದೊಂದಿಗೆ ತನಿಖೆಯನ್ನು ನಡೆಸಲಾಗುವುದು ಎಂದು ಸಚಿವ ಪಿ.ಸಿ. ಗುಪ್ತಾ ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೀಘ್ರದಲ್ಲಿ ತೈಲ ದರ ಕಡಿತ:ದೇವ್ರಾ
ತೈಲ ಮುಷ್ಕರ: ಏರ್‌ ಇಂಡಿಯಾ ಹಾರಾಟಕ್ಕೆ ಅಡ್ಡಿ
ಸತ್ಯಂ ಹಗರಣ ದಿಗಿಲುಗೊಳಿಸುವಂತಹದು: ಸೆಬಿ
ಲಾರಿ ಮುಷ್ಕರ ಮೂರನೇ ದಿನಕ್ಕೆ ಪ್ರವೇಶ
ಆರ್ಥಿಕ ಕುಸಿತ: ಜರ್ಮನಿ ಖ್ಯಾತ ಉದ್ಯಮಿ ಆತ್ಮಹತ್ಯೆ
55 ಸಾವಿರ ತೈಲ ಅಧಿಕಾರಿಗಳಿಂದ ಮುಷ್ಕರ ಆರಂಭ