ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ: ರಾಜುಗೆ 10 ವರ್ಷ ಕಠಿಣ ಶಿಕ್ಷೆ ಸಾಧ್ಯತೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ: ರಾಜುಗೆ 10 ವರ್ಷ ಕಠಿಣ ಶಿಕ್ಷೆ ಸಾಧ್ಯತೆ?
ಸತ್ಯಂ ಮುಖ್ಯಸ್ಥ ಬಿ.ರಾಮಲಿಂಗಾರಾಜು 1.3 ಬಿಲಿಯನ್ ಡಾಲರ್ ವಂಚನೆ ಮಾಡಿರುವುದನ್ನು ಒಪ್ಪಿಕೊಂಡು ಕಾರ್ಪೋರೇಟ್ ಜಗತ್ತಿಗೆ ಅಘಾತವನ್ನು ನೀಡಿದ್ದು, ವಂಚನೆ ಆರೋಪ ಸಾಬೀತಾದಲ್ಲಿ ಸೆಕ್ಯೂರಿಟೀಸ್ ಕಾಂಟ್ರಾಕ್ಟ್‌ ರೆಗ್ಯೂಲೇಶನ್ ಕಾಯ್ದೆ 1956ರ ಸೆಕ್ಷನ್ 23ರ ಪ್ರಕಾರ 10 ವರ್ಷಗಳ ಶಿಕ್ಷೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಸೆಕ್ಯೂರಿಟೀಸ್ ಕಾಂಟ್ರಾಕ್ಟ್‌ ರೆಗ್ಯೂಲೇಶನ್ ಕಾಯ್ದೆ 1956ರ ಸೆಕ್ಷನ್ 23ರ ಪ್ರಕಾರ ನಿರ್ದೇಶಕರು ವ್ಯವಸ್ಥಾಪಕ ಕಾರ್ಯನಿರ್ವಾಹಕ ಅಧಿಕಾರಿಗಳು ತ್ರೈಮಾಸಿಕ ಹಾಗೂ ವಾರ್ಷಿಕ ವರದಿಗಳನ್ನು ತಿರುಚಿದಲ್ಲಿ 10 ವರ್ಷಗಳ ಕಾರಾಗೃಹ ಹಾಗೂ 25 ಕೋಟಿ ರೂ. ದಂಡ ವಿಧಿಸಲಾಗುತ್ತದೆ.

ದೆಹಲಿ ಹೈಕೋರ್ಟ್‌ನ ಖ್ಯಾತ ನ್ಯಾಯಾವಾದಿ ಗೀತಾ ಲುತ್ರಾ ಸುದ್ದಿಗಾರರೊಂದಿಗೆ ಮಾತನಾಡಿ ಸತ್ಯಂ ಮುಖ್ಯಸ್ಥರ ವಿರುದ್ಧ ವಂಚನೆ, ಅಪರಾಧ ಷಡ್ಯಂತ್ರ, ಪರರ ಹಣ ದುರುಪಯೋಗಕ್ಕಾಗಿ ಏಳು ವರ್ಷಗಳ ಕಾರಾಗ್ರಹ ಶಿಕ್ಷೆಯನ್ನು ಅಮನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಸತ್ಯಂ ಬ್ಯಾಲೆನ್ಸ್ ಶೀಟ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಆರ್ಥಿಕ ವಂಚನೆ ಮಾಡಿರುವುದಾಗಿ ಒಪ್ಪಿಕೊಂಡು ರಾಜೀನಾಮೆ ನೀಡುತ್ತಿರುವುದಾಗಿ ಹೈದ್ರಾಬಾದ್ ಮೂಲದ ಐಟಿ ಸಂಸ್ಥೆ ಮುಖ್ಯಸ್ಥ ರಾಮಲಿಂಗಾರಾಜು ಹೇಳಿಕೆ ನೀಡಿದ್ದಾರೆ.

ಸತ್ಯಂ ಮುಖ್ಯಸ್ಥ ತಪ್ಪನ್ನು ಸಮರ್ಥಿಸಿಕೊಂಡ ಹಿನ್ನೆಲೆಯಲ್ಲಿ ಭಾರತದ ಸಂವಿಧಾನದ ಕಾನೂನಿನಡಿಯಲ್ಲಿ ಐಟಿ ಕಾಯ್ದೆ, ಸೆಬಿ ಕಾಯ್ದೆ ಮತ್ತು ವಿದೇಶಿ ವಿನಿಮಯ ಕಾಯ್ದೆಗಳ ವ್ಯಾಪ್ತಿಗೆ ಅನ್ವಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ನಕಲಿ ದಾಖಲೆ ಸೃಷ್ಟಿ ಮತ್ತು ಬ್ಯಾಂಕ್‌ ಖಾತೆಗಳನ್ನು ಮೋಸದಿಂದ ಬದಲಾಯಿಸುವ ಆರೋಪಗಳಿಗೆ ಬಿ.ರಾಮಲಿಂಗಾರಾಜು 2000ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣವನ್ನು ಎದುರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್‌ನ ಖ್ಯಾತ ವಕೀಲರಾದ ಪವನ್ ದುಗ್ಗಾಲ್ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಾಬ್ ಪೋರ್ಟಲ್‌ಗಳಿಗೆ ಸತ್ಯಂ ಉದ್ಯೋಗಿಗಳ ಲಗ್ಗೆ
ಸತ್ಯಂ ಖರೀದಿಯನ್ನು ತಳ್ಳಿಹಾಕಿದ ಇನ್ಫೋಸಿಸ್
ಸತ್ಯಂ ಪ್ರಕರಣ ಕಾರ್ಪೋರೇಟ್‌ ನಿಯಂತ್ರಣಾ ವೈಫಲ್ಯ
ಸತ್ಯಂ ಹಗರಣ ಎಸ್‌ಎಫ್‌ಐಒಗೆ ಶಿಫಾರಸು: ಗುಪ್ತಾ
ಶೀಘ್ರದಲ್ಲಿ ತೈಲ ದರ ಕಡಿತ:ದೇವ್ರಾ
ತೈಲ ಮುಷ್ಕರ: ಏರ್‌ ಇಂಡಿಯಾ ಹಾರಾಟಕ್ಕೆ ಅಡ್ಡಿ