ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ರಾಜು ಹುಡುಕಾಟದಲ್ಲಿ 'ಸೆಬಿ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ರಾಜು ಹುಡುಕಾಟದಲ್ಲಿ 'ಸೆಬಿ'
ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸತ್ಯಂ ಕಂಪ್ಯೂಟರ್ಸ್‌ನ 7 ಸಾವಿರ ಕೋಟಿ ರೂ.ಹಗರಣ ತನಿಖೆಗಾಗಿ ಹೈದ್ರಾಬಾದ್‌ಗೆ ತೆರಳಿದ್ದು, ಸತ್ಯಂ ಮುಖ್ಯಸ್ಥ ರಾಮಲಿಂಗಾರಾಜು ಪರಾರಿಯಾಗಿದ್ದು, ಹುಡುಕಾಟ ಅಸಾಧ್ಯವಾಗಿದೆ ಎಂದು ಹೇಳಿದೆ

ಸತ್ಯಂ ಮುಖ್ಯಸ್ಥ ರಾಜು 7 ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿರುವುದಾಗಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಬಂಧನದ ಭೀತಿಯನ್ನು ಎದುರಿಸುತ್ತಿದ್ದು,ಏಳರಿಂದ ಹತ್ತು ವರ್ಷಗಳ ಶಿಕ್ಷೆಯನ್ನು ಅನುಭವಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಬಿ.ರಾಮಲಿಂಗಾರಾಜು ಹುಡುಕಾಟದಲ್ಲಿ ತೊಡಗಿರುವ ಪೊಲೀಸರಿಗೆ, ಸತ್ಯಂ ಅಡಳಿತ ಮಂಡಳಿ ರಾಜು ವಾಸಸ್ಥಾನದ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲ ಎಂದು ತಳ್ಳಿಹಾಕಿದೆ

ಹೈದ್ರಾಬಾದ್ ವಿಮಾನನಿಲ್ದಾಣದಿಂದ ಬುಧವಾರ ಬೆಳಿಗ್ಗೆ ಟೆಕ್ಸಾಸ್‌ಗೆ ತೆರಳಿದ್ದಾರೆ ಎಂದು ಹೈದ್ರಾಬಾದ್ ಪೊಲೀಸರು ತಿಳಿಸಿದ್ದಾರೆ. ಆರ್ಥಿಕ ವಂಚನೆಯನ್ನು ಒಪ್ಪಿಕೊಂಡ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಮರೆಯಾಗಿದ್ದಾರೆ. ಆದರೆ ಖಾಸಗಿ ಟಿ.ವಿ. ಮೂಲಗಳ ಪ್ರಕಾರ ರಾಜು ಟೆಕ್ಸಾಸ್‌ಗೆ ತೆರಳಿದ್ದಾರೆ.

ಬ್ರಿಟಿಷ್ ಟೆಲಿಕಾಂ ಸಲ್ಯೂಶನ್ಸ್‌ ಸಂಸ್ಥೆ ಮತ್ತು ಮೆಟಾಸ್ ಮಧ್ಯೆ ಪ್ರಕರಣ ನೆನೆಗುದಿಯಲ್ಲಿದ್ದು, ಸತ್ಯಂ ಮುಖ್ಯಸ್ಥ ರಾಜು ಹಾಗೂ ಹಿರಿಯ ವಿರ್ದೇಶಕರು ವಿಚಾರಣೆ ಸಂದರ್ಭದಲ್ಲಿ ಉಪಸ್ಥಿತರಿರಬೇಕು ಎಂದು ಬ್ರಿಟನ್ ಟೆಲಿಕಾಂ ವಕೀಲರು ಒತ್ತಾಯಿಸಿದ್ದಾರೆ.

ಮತ್ತೊಂದು ಮೂಲಗಳ ಪ್ರಕಾರ ರಾಜು, ದುಬೈಗೆ ತೆರಳಿದ್ದಾರೆ ಎನ್ನುವ ಉಹಾಪೋಹಗಳಿದ್ದು, ರಾಜು ಮೊಬೈಲ್ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ: ರಾಜುಗೆ 10 ವರ್ಷ ಕಠಿಣ ಶಿಕ್ಷೆ ಸಾಧ್ಯತೆ?
ಜಾಬ್ ಪೋರ್ಟಲ್‌ಗಳಿಗೆ ಸತ್ಯಂ ಉದ್ಯೋಗಿಗಳ ಲಗ್ಗೆ
ಸತ್ಯಂ ಖರೀದಿಯನ್ನು ತಳ್ಳಿಹಾಕಿದ ಇನ್ಫೋಸಿಸ್
ಸತ್ಯಂ ಪ್ರಕರಣ ಕಾರ್ಪೋರೇಟ್‌ ನಿಯಂತ್ರಣಾ ವೈಫಲ್ಯ
ಸತ್ಯಂ ಹಗರಣ ಎಸ್‌ಎಫ್‌ಐಒಗೆ ಶಿಫಾರಸು: ಗುಪ್ತಾ
ಶೀಘ್ರದಲ್ಲಿ ತೈಲ ದರ ಕಡಿತ:ದೇವ್ರಾ