ನವದೆಹಲಿ: ತೈಲ ಕ್ಷೇತ್ರದ ಅಧಿಕಾರಿಗಳ ಮುಷ್ಕರದಿಂದಾಗಿ ಇಂಧನ ಕೊರತೆ ಮತ್ತು ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಯನ್ನು ಮನಗಂಡ ಸರಕಾರ, ತೈಲ ವಿತರಣೆಗೆ ಯಾವುದೇ ಅಡ್ಡಿಯಾಗದಂತಾಗಲು, ಕೇಂದ್ರೀಯ ಪಡೆಗಳನ್ನು ಕರೆಸಿಕೊಂಡಿದೆ. ಅವಶ್ಯಕತೆಯಿದ್ದೆಡೆ ಕೇಂದ್ರೀಯಪಡೆಗಳನ್ನು ನಿಯೋಜಿಸಲಾಗುತ್ತದೆ ಎಂದು ಪೆಟ್ರೋಲಿಯಂ ಕಾರ್ಯದರ್ಶಿ ಆರ್.ಎಸ್.ಪಾಂಡೆ ಹೇಳಿದ್ದಾರೆ. |