ಹೈದರಾಬಾದ್: ಸತ್ಯಂ ಕಂಪ್ಯೂಟರ್ಸ್ ಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಶೇರು ಮಿನಿಮಯ ಕೇಂದ್ರ(ಸೆಬಿ)ದ ತಂಡ ಒಂದು ಸಂಸ್ಥಾಪಕ ರಾಮಲಿಂಗಾ ರಾಜು ಮನೆಗೆ ತೆರಳಿದೆ. ಆದರೆ ಮನೆಗೆ ಬೀಗ ಜಡಿದಿರುವ ಕಾರಣ ತಂಡವು ಬರಿಗೈಲಿ ಮರಳಬೇಕಾಯಿತು.
ತಂಡವು ಸತ್ಯಂ ಮುಖ್ಯಕಚೇರಿಗೆ ತೆರಳಲಿದೆ ಎಂದು ಹೇಳಲಾಗಿದೆ. ಅಲ್ಲದೆ ಸೆಬಿಯ ಮುಂಬೈ ಕಚೇರಿಯಲ್ಲಿ ಹಾಜರಾಗುವಂತೆ ರಾಜುಗೆ ನೋಟೀಸು ನೀಡಿದೆ. ಮಾರುಕಟ್ಟೆ ನಿಯಂತ್ರಕರ ಆದೇಶದನ್ವಯ ಸೆಬಿಯ ತಂಡವು ತನಿಖೆಗಾಗಿ ಗುರುವಾರವೇ ಸತ್ಯಂ ಕಚೇರಿಗೆ ತೆರಳಿತ್ತು.
ಬುಧವಾರದಂದು ಸತ್ಯಂ ಸಂಸ್ಥಾಪಕ ರಾಮಲಿಂಗಾ ರಾಜು ಅವರು ಸಂಸ್ಥೆಯಲ್ಲಿ 7,800 ಕೋಟಿ ರೂಪಾಯಿ ಅವ್ಯವಹಾರವಾಗಿರುವುದಾಗಿ ಹೇಳಿ ಸಂಸ್ಥೆಗೆ ರಾಜು ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ತನಿಖೆಗೆ ಆದೇಶ ನೀಡಲಾಗಿದೆ.
ರಾಜು ಇದೀಗ ಎಲ್ಲಿ ಅಡಗಿದ್ದಾರೆ ಎಂಬ ಕುರಿತು ಊಹಾಪೋಹಗಳು ಹುಟ್ಟಿಕೊಂಡಿದೆ. ಅವರ ವಕೀಲರು ಹೇಳುವ ಪ್ರಕಾರ ಸತ್ಯಂನ ಮಾಜಿ ಅಧ್ಯಕ್ಷ ಹೈದರಾಬಾದಿನಲ್ಲೇ ಇದ್ದಾರೆ. ಅವರು ನಗರದ ಹೊರವಲಯದಲ್ಲಿರುವ ಅತಿಥಿ ಗೃಹದಲ್ಲಿರಬಹುದು ಎಂಬುದಾಗಿಯೂ ಊಹಿಸಲಾಗಿದೆ. |