ಕೇಂದ್ರ ಸರ್ಕಾರವು ಹಠಾತ್ ಬೆಳವಣಿಗೆಯೊಂದರಲ್ಲಿ ಸತ್ಯಂ ಕಂಪ್ಯೂಟರ್ಸ್ನ ನಿರ್ದೇಶಕರ ಮಂಡಳಿಯನ್ನು ಸಂಪೂರ್ಣ ವಜಾಗೊಳಿಸಿದ್ದು ಶನಿವಾರ ನಿಗದಿಯಾಗಿದ್ದ ಸಭೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಕಂಪೆನಿಯ ವ್ಯವಾಹರದಲ್ಲಿ ದಿಢೀರ್ ಮಧ್ಯಪ್ರವೇಶಿಸಿದ ಕೇಂದ್ರ, ಸಂಕಷ್ಟಕ್ಕೆ ಬಿದ್ದಿರುವ ಕಂಪೆನಿಯ ಹಿತರಕ್ಷಣೆಗೆ ಮುಂದಾಗಿದೆ. ಕಂಪೆನಿ ಕಾನೂನು ಮಂಡಳಿಯಿಂದ ಒಪ್ಪಿಗೆ ಪಡೆದು ಸೂಕ್ತ 10 ಮಂದಿಯನ್ನು ಸತ್ಯಂ ನಿರ್ದೇಶಕರನ್ನಾಗಿ ನೇಮಿಸಲಾಗುವುದು ಎಂದು ಕೇಂದ್ರ ತಿಳಿಸಿದೆ. ಮುಂದಿನ ಏಳು ದಿನಗಳೊಳಗಾಗಿ ನೂತನ ಮಂಡಳಿಯು ಸಭೆ ನಡೆಸಲಿದೆ ಎಂದು ಕಂಪೆನಿಗಳ ವ್ಯವಹಾರಗಳ ಸಚಿವ ಪ್ರೇಮ್ಚಂದ್ ಗುಪ್ತಾ ಹೇಳಿದ್ದಾರೆ. |