ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯ ಹಗರಣದ ಹಿನ್ನೆಲೆಯಲ್ಲಿ ದೇಶದ ಕೈಗಾರಿಕೆ ಕ್ಷೇತ್ರಗಳ ಮೇಲಾದ ಪರಿಣಾಮಗಳ ಕುರಿತಂತೆ ಚರ್ಚಿಸಲು ಹಿರಿಯ ಉದ್ಯಮಿಗಳು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದರು. ಮಾಜಿ ಸಿಐಐ ಅಧ್ಯಕ್ಷ ಆರ್ ಶೇಷಾಶಾಯಿ, ಸಿಐಐ ಮುಖ್ಯಪ್ರವರ್ತಕ ತರುಣ್ ದಾಸ್ ಮತ್ತು ಸುರೇಶ್ ನಿಯೋಟಿಯಾ ಹಾಗೂ ಗುಜರಾತ್ ಅಂಬುಜಾ ಸಿಮೆಂಟ್ ಕಂಪೆನಿಯ ಅಧ್ಯಕ್ಷ ಸೇರಿದಂತೆ ಹಲವು ಉದ್ಯಮಿಗಳು ಪ್ರಧಾನಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಕೈಗಾರಿಕೋದ್ಯಮದ ಬೆಳವಣಿಗೆಗಳ ಕುರಿತಂತೆ ಚರ್ಚಿಸಿದರು. ಸತ್ಯಂ ವಂಚನೆ ಪ್ರಕರಣ ಸೇರಿದಂತೆ ವಿಶ್ವಬ್ಯಾಂಕ್ ದೇಶದ ಐದು ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಮೇಲೆ ಹೇರಿರುವ ನಿಷೇಧ ಕುರಿತಂತೆ ಪ್ರಧಾನಿಯವರೊಂದಿಗೆ ಚರ್ಚಿಸಲಾಯಿತು ಎಂದು ಉದ್ಯಮಿಗಳು ತಿಳಿಸಿದ್ದಾರೆ.ಸತ್ಯಂ ಕಂಪ್ಯೂಟರ್ಸ್ ಪುನಶ್ಚೇತನಕ್ಕಾಗಿ ಸರಕಾರ ಮಧ್ಯಸ್ಥಿಕೆ ವಹಿಸಿ, ನೂತನ ನಿರ್ದೇಶಕ ಮಂಡಳಿಯನ್ನು ರಚಿಸಿರುವುದನ್ನು ಉದ್ಯಮಿಗಳು ಸ್ವಾಗತಿಸಿದರುದೇಶದ ಕೈಗಾರಿಕೋದ್ಯಮದ ಸ್ವರೂಪವನ್ನು ಉಳಿಸಲು ಸಿಐಐ, ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ನರೇಶ್ ಚಂದ್ರ ಅವರ ನೇತೃತ್ವದಲ್ಲಿ ಕಾರ್ಪೋರೇಟ್ ಸಂಸ್ಥೆಗಳ ಮೇಲ್ವಿಚಾರಣೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಸಿಐಐ ಮೂಲಗಳು ತಿಳಿಸಿವೆ. |