ಸತ್ಯಂ ಕಂಪ್ಯೂಟರ್ಸ್ನ ತುರ್ತು ನಿರ್ವಹಣಾ ಸಂಶೋಧನಾ ಸಂಸ್ಥೆಯ(ಇಎಂಆರ್ಐ) ಮೇಲ್ವಿಚಾರಕ ಮಂಡಳಿಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ರಾಜೀನಾಮೆ ನೀಡಿದ್ದಾರೆ. ಸತ್ಯಂ ಹಗರಣ ಹೊರಬಂದ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿ ಕಲಾಂ ಸೇರಿದಂತೆ ಏಳು ಮಂದಿ ಗಣ್ಯ ವ್ಯಕ್ತಿಗಳು ಕಾರ್ಯಕಾರಿ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಇಎಂಆರ್ಆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಐಸಿಐಸಿಐ ಬ್ಯಾಂಕ್ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಐಐ ಮುಖ್ಯ ಪ್ರವರ್ತಕ ತರುಣ್ ದಾಸ್ ಹಾರ್ವರ್ಡ್ ಬಿಜಿನೆಸ್ ಸ್ಕೂಲ್ನ ಕೃಷ್ಣ ಪಲೇಪು, ಸತ್ಯಂನ ಮಾಜಿ ಸಿಇಒ ಮತ್ತು ವ್ಯವಸ್ಥಾಪಕ ಬಿ.ರಾಮಾರಾಜು ಮತ್ತು ನಾಸ್ಕಾಂನ ಮಾಜಿ ಅಧ್ಯಕ್ಷ ಕಿರಣ್ ಕಾರ್ನಿಕ್ ಸತ್ಯಂನ ಮೇಲ್ವಿಚಾರಕ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಇಎಂಆರ್ಐ ಮೂಲಗಳು ತಿಳಿಸಿವೆ.ಜನೆವರಿ 23 ರಂದು ಮೇಲ್ವಿಚಾರಕ ಮಂಡಳಿಯ ಸಭೆ ನಡೆಯಲಿದ್ದು, ಸಭೆಯಲ್ಲಿ ಗಣ್ಯ ವ್ಯಕ್ತಿಗಳ ರಾಜೀನಾಮೆ ಪತ್ರಗಳನ್ನು ಸ್ವೀಕಾರಕ್ಕಾಗಿ ಸಲ್ಲಿಸಲಾಗುವುದು ಎಂದು ತಿಳಿಸಿದೆ. 2005 ರಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಉಚಿತ ತುರ್ತುಸೇವೆಗಳನ್ನು ನೀಡಲು ತುರ್ತುನಿರ್ವಹಣಾ ಸಂಶೋಧನಾ ಸಂಸ್ಥೆ (ಇಎಂಆರ್ಐ) ರಚಿಸಲಾಗಿತ್ತು ಎಂದು ಸತ್ಯಂ ಕಂಪೆನಿಯ ಮೂಲಗಳು ತಿಳಿಸಿವೆ. |