ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂನ ಇಎಂಆರ್‌ಐ ಮಂಡಳಿಗೆ ಕಲಾಂ ರಾಜೀನಾಮೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂನ ಇಎಂಆರ್‌ಐ ಮಂಡಳಿಗೆ ಕಲಾಂ ರಾಜೀನಾಮೆ
PTI
ಸತ್ಯಂ ಕಂಪ್ಯೂಟರ್ಸ್‌ನ ತುರ್ತು ನಿರ್ವಹಣಾ ಸಂಶೋಧನಾ ಸಂಸ್ಥೆಯ(ಇಎಂಆರ್‌ಐ) ಮೇಲ್ವಿಚಾರಕ ಮಂಡಳಿಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ರಾಜೀನಾಮೆ ನೀಡಿದ್ದಾರೆ.

ಸತ್ಯಂ ಹಗರಣ ಹೊರಬಂದ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿ ಕಲಾಂ ಸೇರಿದಂತೆ ಏಳು ಮಂದಿ ಗಣ್ಯ ವ್ಯಕ್ತಿಗಳು ಕಾರ್ಯಕಾರಿ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಇಎಂಆರ್‌ಆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಐಸಿಐಸಿಐ ಬ್ಯಾಂಕ್‌ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಐಐ ಮುಖ್ಯ ಪ್ರವರ್ತಕ ತರುಣ್ ದಾಸ್ ಹಾರ್ವರ್ಡ್‌ ಬಿಜಿನೆಸ್ ಸ್ಕೂಲ್‌ನ ಕೃಷ್ಣ ಪಲೇಪು, ಸತ್ಯಂನ ಮಾಜಿ ಸಿಇಒ ಮತ್ತು ವ್ಯವಸ್ಥಾಪಕ ಬಿ.ರಾಮಾರಾಜು ಮತ್ತು ನಾಸ್ಕಾಂನ ಮಾಜಿ ಅಧ್ಯಕ್ಷ ಕಿರಣ್ ಕಾರ್ನಿಕ್ ಸತ್ಯಂನ ಮೇಲ್ವಿಚಾರಕ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಇಎಂಆರ್‌ಐ ಮೂಲಗಳು ತಿಳಿಸಿವೆ.

ಜನೆವರಿ 23 ರಂದು ಮೇಲ್ವಿಚಾರಕ ಮಂಡಳಿಯ ಸಭೆ ನಡೆಯಲಿದ್ದು, ಸಭೆಯಲ್ಲಿ ಗಣ್ಯ ವ್ಯಕ್ತಿಗಳ ರಾಜೀನಾಮೆ ಪತ್ರಗಳನ್ನು ಸ್ವೀಕಾರಕ್ಕಾಗಿ ಸಲ್ಲಿಸಲಾಗುವುದು ಎಂದು ತಿಳಿಸಿದೆ.

2005ರಲ್ಲಿ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಉಚಿತ ತುರ್ತುಸೇವೆಗಳನ್ನು ನೀಡಲು ತುರ್ತುನಿರ್ವಹಣಾ ಸಂಶೋಧನಾ ಸಂಸ್ಥೆ (ಇಎಂಆರ್‌ಐ) ರಚಿಸಲಾಗಿತ್ತು ಎಂದು ಸತ್ಯಂ ಕಂಪೆನಿಯ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಿರಿಯ ಉದ್ಯಮಿಗಳಿಂದ ಪ್ರಧಾನಿ ಭೇಟಿ
ಜ.15 ರಂದು ಪೆಟ್ರೋಲ್, ಡೀಸೆಲ್‌ ದರ ಕಡಿತ ಸಾಧ್ಯತೆ?
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ಇನ್ಫೋಸಿಸ್‌ಗೆ 1,641 ಕೋಟಿ ನಿವ್ವಳ ಲಾಭ
ಸತ್ಯಂ ವಿಲೀನ ಆಯ್ಕೆ ಮುಕ್ತ; ಸ್ವತಂತ್ರ ಆಡಿಟಿಂಗ್
ಬೇಡಿಕೆ ಪರಿಶೀಲನೆಗೆ ಸಮಿತಿ: ಟ್ರಕ್ ಮುಷ್ಕರ ಅಂತ್ಯ