ಜಾಗತಿಕ ಆರ್ಥಿಕ ಕುಸಿತದಿಂದ ಬಳಲುತ್ತಿರುವ ಕೈಗಾರಿಕೋದ್ಯಮಗಳಿಗೆ ಪುನಶ್ಚೇತನ ನೀಡಲು ಕೇಂದ್ರ ಸರಕಾರ ಮತ್ತಷ್ಟು ಪ್ಯಾಕೇಜ್ಗಳನ್ನು ಘೋಷಿಸಲಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ಸಚಿವ ಕಮಲ್ನಾಥ್ ಹೇಳಿದ್ದಾರೆ.ಆರ್ಥಿಕ ಕುಸಿತದಿಂದಾಗಿ ಕೆಲ ಕ್ಷೇತ್ರಗಳ ವಹಿವಾಟಿನಲ್ಲಿ ಹಿನ್ನೆಡೆಯಾಗಿದ್ದು, ಅಂತಹ ಕ್ಷೇತ್ರಗಳ ಅಭಿವೃದ್ಧಿಗಾಗಿ ಉತ್ತೇಜನ ಪ್ಯಾಕೇಜ್ಗಳನ್ನು ಘೋಷಿಸಲಾಗುತ್ತಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಅನುಕೂಲವಾಗುತ್ತದೆ ಎಂದು ಸಚಿವ್ ಕಮಲ್ನಾಥ್ ತಿಳಿಸಿದರು.ಕೇಂದ್ರ ಸರಕಾರ ಜನೆವರಿ ತಿಂಗಳಲ್ಲಿ ಮತ್ತಷ್ಟು ಪ್ಯಾಕೇಜ್ ಘೋಷಿಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ , ವಾಣಿಜ್ಯ ಸಚಿವಾಲಯ ಎಕ್ಸ್ಪೋರ್ಟ್ ಪ್ರಮೋಷನ್ ಕೌನ್ಸಿಲ್ ಮತ್ತು ಫೆಡರೇಶನ್ ಆಫ್ ಇಂಡಿಯನ್ ಎಕ್ಸಪೋರ್ಟ್ ಆರ್ಗನೈಜೇಶನ್ ಸಂಸ್ಥೆಗಳ ಸಭೆಯನ್ನು ಕರೆದು ಚರ್ಚಿಸಲಾಯಿತು ಎಂದು ವಾಣಿಜ್ಯಸಚಿವಾಲಯದ ಮೂಲಗಳು ತಿಳಿಸಿವೆ. ಕೇಂದ್ರ ಸರಕಾರ ಉದ್ಯಮಗಳ ಮೇಲೆ ತೆರಿಗೆ ಕಡಿತ ಘೋಷಿಸಿರುವುದರಿಂದ ಕೇಂದ್ರ ಸರಕಾರಕ್ಕೆ 8 ಸಾವಿರ ಕೋಟಿ ನಷ್ಟವಾಗಿದ್ದರೂ ಉದ್ಯಮಗಳ ಪುನಶ್ಚೇತನಕ್ಕಾಗಿ ಆರ್ಬಿಐನಿಂದ ರೆಪೊ ರಿವರ್ಸ್ ರೆಪೊ, ಬಡ್ಡಿ ದರ ಕಡಿತವನ್ನು ಘೋಷಿಸಿದೆ ಎಂದು ಸಚಿವ ಕಮಲ್ನಾಥ್ ತಿಳಿಸಿದರು. |