ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉದ್ಯೋಗಿಗಳ ವೇತನ ಪಾವತಿಗೆ ಆದ್ಯತೆ:ಮನೋಹರನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದ್ಯೋಗಿಗಳ ವೇತನ ಪಾವತಿಗೆ ಆದ್ಯತೆ:ಮನೋಹರನ್
PTI
ವಿವಾದದ ಸುಳಿಯಲ್ಲಿ ಸಿಲುಕಿ ಜರ್ಜಿರಿತವಾದ ಸತ್ಯಂ ಕಂಪ್ಯೂಟರ್ಸ್ ಸಾಫ್ಟ್‌ವೇರ್ ಕಂಪೆನಿಗೆ, ಎಚ್‌ಡಿಎಫ್‌ಸಿ ಮುಖ್ಯಸ್ಥ ದೀಪಕ್ ಪಾರೇಕ್ ಮತ್ತು ಟಿಎನ್‌ ಮನೋಹರನ್ ಅವರನ್ನು ಸರಕಾರ ನೂತನ ಲೆಕ್ಕ ಪರಿಶೋಧಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಟಿ. ಎನ್‌. ಮನೋಹರನ್, ಸತ್ಯಂ ಕಂಪ್ಯೂಟರ್ಸ್ ಸರ್ವಿಸಸ್ ಸಂಸ್ಥೆಯ ಆರ್ಥಿಕ ವಹಿವಾಟನ್ನು ಅಧ್ಯಯನ ನಡೆಸಿ ಉದ್ಯೋಗಿಗಳಿಗೆ ವೇತನ ಮತ್ತು ಕಂಪೆನಿಯ ಮತ್ತಿತರ ಬಾಕಿ ಪಾವತಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕೇಂದ್ರ ಸರಕಾರ, ಸಿಐಐ ಮುಖ್ಯಸ್ಥ ತರುಣ್ ದಾಸ್, ಐಸಿಎಐ ಮಾಜಿ ಅಧ್ಯಕ್ಷರಾದ ಟಿಎನ್‌ಮನೋಹರನ್ ಮತ್ತು ಎಲ್‌ಐಸಿಯ ಬಾಲಕೃಷ್ಣನ್, ಎಚ್‌ಡಿಎಫ್‌ಸಿ ಮುಖ್ಯಸ್ಥ ದೀಪಕ್ ಪಾರೇಕ್ ನಾಸ್ಕಾಂ ಮಾಜಿ ಅಧ್ಯಕ್ಷ ಕಿರಣ್ ಕಾರ್ನಿಕ್ ಮತ್ತು ಮಾಜಿ ಸೆಬಿ ಸದಸ್ಯ ಸಿ.ಅಚ್ಯುತನ್ ಅವರನ್ನು ನೇಮಕ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸತ್ಯಂ ಮಾಜಿ ಮುಖ್ಯಸ್ಥ ಬಿ.ರಾಮಲಿಂಗಾರಾಜು ಕಳೆದ ಹಲವು ವರ್ಷಗಳಿಂದ ಬ್ಯಾಂಕ್‌ ಖಾತೆಗಳನ್ನು ತಿದ್ದುಪಡಿ ಮಾಡಿರುವುದಾಗಿ ಘೋಷಿಸಿ ರಾಜೀನಾಮೆ ನೀಡಿದ ನಂತರ ಸರಕಾರ 50 ಸಾವಿರ ಉದ್ಯೋಗಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನೂತನ ಮಂಡಳಿಯನ್ನು ರಚಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2009ರಲ್ಲಿ ಚಿನ್ನದ ದರ ದಾಖಲೆಯ ಹೆಚ್ಚಳ ?
50 ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದ ಸತ್ಯಂ ರಾಜು?
'ಸತ್ಯಂ'ಗೆ ನೆರವಿಲ್ಲ: ಸರಕಾರ
ನಾರ್ಟೆಲ್ ನೆಟ್‌ವರ್ಕ್ಸ್ ದಿವಾಳಿ
ಶೇ.5.24ಕ್ಕಿಳಿದ ಹಣದುಬ್ಬರ
ಪರದೇಶಕ್ಕೆ ಹಾರಿರುವ ಸತ್ಯಂ ದೊರೆಗಳು