ವಿವಾದದ ಸುಳಿಯಲ್ಲಿ ಸಿಲುಕಿ ಜರ್ಜಿರಿತವಾದ ಸತ್ಯಂ ಕಂಪ್ಯೂಟರ್ಸ್ ಸಾಫ್ಟ್ವೇರ್ ಕಂಪೆನಿಗೆ, ಎಚ್ಡಿಎಫ್ಸಿ ಮುಖ್ಯಸ್ಥ ದೀಪಕ್ ಪಾರೇಕ್ ಮತ್ತು ಟಿಎನ್ ಮನೋಹರನ್ ಅವರನ್ನು ಸರಕಾರ ನೂತನ ಲೆಕ್ಕ ಪರಿಶೋಧಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಟಿ. ಎನ್. ಮನೋಹರನ್, ಸತ್ಯಂ ಕಂಪ್ಯೂಟರ್ಸ್ ಸರ್ವಿಸಸ್ ಸಂಸ್ಥೆಯ ಆರ್ಥಿಕ ವಹಿವಾಟನ್ನು ಅಧ್ಯಯನ ನಡೆಸಿ ಉದ್ಯೋಗಿಗಳಿಗೆ ವೇತನ ಮತ್ತು ಕಂಪೆನಿಯ ಮತ್ತಿತರ ಬಾಕಿ ಪಾವತಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ.ಕೇಂದ್ರ ಸರಕಾರ, ಸಿಐಐ ಮುಖ್ಯಸ್ಥ ತರುಣ್ ದಾಸ್, ಐಸಿಎಐ ಮಾಜಿ ಅಧ್ಯಕ್ಷರಾದ ಟಿಎನ್ಮನೋಹರನ್ ಮತ್ತು ಎಲ್ಐಸಿಯ ಬಾಲಕೃಷ್ಣನ್, ಎಚ್ಡಿಎಫ್ಸಿ ಮುಖ್ಯಸ್ಥ ದೀಪಕ್ ಪಾರೇಕ್ ನಾಸ್ಕಾಂ ಮಾಜಿ ಅಧ್ಯಕ್ಷ ಕಿರಣ್ ಕಾರ್ನಿಕ್ ಮತ್ತು ಮಾಜಿ ಸೆಬಿ ಸದಸ್ಯ ಸಿ.ಅಚ್ಯುತನ್ ಅವರನ್ನು ನೇಮಕ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸತ್ಯಂ ಮಾಜಿ ಮುಖ್ಯಸ್ಥ ಬಿ.ರಾಮಲಿಂಗಾರಾಜು ಕಳೆದ ಹಲವು ವರ್ಷಗಳಿಂದ ಬ್ಯಾಂಕ್ ಖಾತೆಗಳನ್ನು ತಿದ್ದುಪಡಿ ಮಾಡಿರುವುದಾಗಿ ಘೋಷಿಸಿ ರಾಜೀನಾಮೆ ನೀಡಿದ ನಂತರ ಸರಕಾರ 50 ಸಾವಿರ ಉದ್ಯೋಗಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನೂತನ ಮಂಡಳಿಯನ್ನು ರಚಿಸಿದೆ. |