ವಂಚನೆ ಪೀಡಿತ ಸತ್ಯಂ ಕಂಪ್ಯೂಟರ್ಸ್ಗೆ ನೂತನ ಆಡಿಟ್ ಮಂಡಳಿ ಮುಖ್ಯಸ್ಥರನ್ನಾಗಿ ಟಿ.ಎನ್ ಮನೋಹರನ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸತ್ಯಂ ನಿರ್ದೇಶಕ ಮಂಡಳಿಯ ಮೂಲಗಳು ತಿಳಿಸಿವೆ.ಸತ್ಯಂ ಸಿಇಒ ಮನೋಹರನ್, ಇನ್ಸ್ಟೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಅಸೋಸಿಯೇಶನ್ನ ಮಾಜಿ ಅಧ್ಯಕ್ಷರಾಗಿದ್ದು, ಸತ್ಯಂ ಮಂಡಳಿಯಲ್ಲಿ ಕೂಡಾ ಸ್ಥಾನ ಪಡೆದಿದ್ದಾರೆ ಎನ್ನಲಾಗಿದೆ. ಸತ್ಯಂ ಮಾಜಿ ಮುಖ್ಯಸ್ಥ ರಾಜು ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಬಂಧನಕ್ಕೆ ಆದೇಶಿಸಲಾಗಿದ್ದು, ಸತ್ಯಂಗೆ ಮನೋಹರನ್ ಸೇರಿದಂತೆ ಸಿ. ಅಚ್ಯುತನ್ ಮತ್ತು ಎಸ್.ಬಿ.ಮೈನಾಕ್ ಅವರುಗಳನ್ನು ನೂತನ ಲೆಕ್ಕಪರಿಶೋಧಕ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಅಮರ್ಚಂದ್ ಆಂಡ್ ಮಂಗಲ್ದಾಸ್ ಮತ್ತು ಸುರೇಶ್ ಎ.ಶರಾಫ್ ಆಂಡ್ ಕೋ ಅವರನ್ನು ಸತ್ಯಂ ಮಂಡಳಿಯ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಚೆನ್ನೈ ಮೂಲದ ಬ್ರಹ್ಮಯ್ಯ ಆಂಡ್ ಕೋ ಅವರನ್ನು ಆಂತರಿಕ ಲೆಕ್ಕಪರಿಶೋಧಕರನ್ನಾಗಿ ನೇಮಕ ಮಾಡಿದ್ದು, ತಕ್ಷಣದಿಂದಲೇ ಹುದ್ದೆಯನ್ನು ವಹಿಸಿಕೊಳ್ಳುವಂತೆ ಆದೇಶ ನೀಡಲಾಗಿದೆ.ಕೇಂದ್ರ ಸರಕಾರದ ಪರಿಹಾರ ಪ್ಯಾಕೇಜ್ ತಿರಸ್ಕರಿಸಿದ ಸತ್ಯಂ ನಿರ್ದೇಶಕ ಮಂಡಳಿ, ಸತ್ಯಂಗೆ ಬರಬೇಕಾದ ಇತರ ಕಂಪೆನಿಗಳ ಬಾಕಿ ಹಣ ನಿಗದಿತ ಅವಧಿಗೆ ಮರಳಿದಲ್ಲಿ ಇತರ ಆರ್ಥಿಕ ಸಹಾಯಕತೆಯ ಅಗತ್ಯವಿಲ್ಲ. ಒಂದು ವೇಳೆ ಹಣಕಾಸಿನ ಅಗತ್ಯವಾದಲ್ಲಿ ಬ್ಯಾಂಕ್ಗಳಿಂದ ಸಾಲವನ್ನು ಪಡೆಯಲಾಗುವುದು ಎಂದು ನಿರ್ದೇಶಕ ಮಂಡಳಿ ಸದಸ್ಯ ದೀಪಕ್ ಪಾರೇಕ್ ಹೇಳಿದ್ದಾರೆಸತ್ಯಂ ನಿರ್ದೇಶಕ ಮಂಡಳಿ ವಾರಕ್ಕೊಮ್ಮೆ ಸಭೆ ಸೇರಲು ನಿರ್ಧರಿಸಿದ್ದು, ಸತ್ಯಂ ಕಂಪೆನಿಯನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರತರಲು ಯೋಜನೆಗಳನ್ನು ಹಾಕಿಕೊಂಡಿದೆ ಎಂದು ಸತ್ಯಂ ಅಧಿಕಾರಿಗಳು ತಿಳಿಸಿದ್ದಾರೆ. ಸತ್ಯಂ ನಿರ್ದೇಶಕ ಮಂಡಳಿ, ಬ್ಯಾಂಕ್ಗಳು ಮತ್ತು ಆರ್ಥಿಕ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಕಂಪೆನಿಯ ನಗದು ಹಣ ಚಲಾವಣೆಗಾಗಿ ಹಣವನ್ನು ಕ್ರೂಢೀಕರಿಸುತ್ತಿದೆ. ಹಾಗೂ ಕಂಪೆನಿಗೆ ಮುಖ್ಯ ಹಣಕಾಸು ಅಧಿಕಾರಿ ಹುದ್ದೆಯನ್ನು ಭರ್ತಿ ಮಾಡಲು ಹುಡುಕಾಟ ನಡೆಸಿದೆ ಎಂದು ಸತ್ಯಂ ಮೂಲಗಳು ತಿಳಿಸಿವೆ. |