ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಾಜು ಉನ್ನತಿಗೆ ನಾನು ಹೊಣೆಯಲ್ಲ :ರೆಡ್ಡಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜು ಉನ್ನತಿಗೆ ನಾನು ಹೊಣೆಯಲ್ಲ :ರೆಡ್ಡಿ
ಸತ್ಯಂ ಕಂಪ್ಯೂಟರ್ಸ್ ಮಾಜಿ ಮುಖ್ಯಸ್ಥ ಬಿ.ರಾಮಲಿಂಗಾರಾಜು ಅವರ ಉನ್ನತಿಗೆ ತಾವು ಕಾರಣಿಭೂತರು ಎನ್ನುವ ಆರೋಪಗಳನ್ನು ತಳ್ಳಿಹಾಕಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್ .ರಾಜಶೇಖರ್‌ರೆಡ್ಡಿ, ರಾಜು ಉನ್ನತಿಗೆ ಟಿಡಿಪಿ ನಾಯಕ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಾರಣಿಭೂತರಾಗಿದ್ದಾರೆ ಎಂದು ಹೇಳಿದ್ದಾರೆ.

ನಾನು ಮುಖ್ಯಮಂತ್ರಿಯಾದಾಗ ರಾಜು ಉನ್ನತಮಟ್ಟವನ್ನು ತಲುಪಿದ್ದರು. ಅವರಿಗೆ ನನ್ನ ಬೆಂಬಲದ ಅವಶ್ಯಕತೆಯಿರಲಿಲ್ಲ . ಆದ್ದರಿಂದ ರಾಜು ಉನ್ನತಿಗೆ ನಾನು ಕಾರಣವಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಬಿಲ್‌ಕ್ಲಿಂಟನ್‌ ಕಳೆದ 2000ರಲ್ಲಿ ಹೈದ್ರಾಬಾದ್‌‌ಗೆ ಭೇಟಿ ನೀಡಿದಾಗ ರಾಜು ವೇದಿಕೆಯನ್ನು ಹಂಚಿಕೊಳ್ಳಲು ನಾಯ್ಡು ಕಾರಣರಾಗಿರುವುದು ಅವರ ಉನ್ನತಿಗೆ ನಾಂದಿಯಾಗಿರಬಹುದು ಎಂದು ನುಡಿದರು.

ತೆಲಂಗಾಣ ಸಮಸ್ಯೆಯ ಕುರಿತಂತೆ ಚರ್ಚಿಸಲು ಕಾಂಗ್ರೆಸ್ ಹೈಕಮಾಂಡ್‌ ಸಮನ್ಸ್ ಜಾರಿಗೊಳಿಸಿದ್ದು, ಸತ್ಯಂ ಪ್ರಕರಣದಿಂದಾಗಿ ಮುಂಬರುವ ಚುನಾವಣೆಯಲ್ಲಿ ಪಕ್ಷದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಮುಖ್ಯಮಂತ್ರಿ ರೆಡ್ಡಿ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬೇಡಿಕೆ ಪೂರೈಕೆಗೆ ಮತ್ತಷ್ಟು ಪ್ಯಾಕೇಜ್: ಕಮಲ್‌ನಾಥ್
ರಾಜು ಶ್ರೇಯಸ್ಸಿಗೆ ಕಾರಣ ನಾನಲ್ಲ: ರೆಡ್ಡಿ
ಎಸ್‌ಬಿಎಂಗೆ 182.59 ಕೋಟಿ ನಿವ್ವಳ ಲಾಭ
ಮೆಟಾಸ್ ಇನ್‌ಫ್ರಾ: ಸಿಇಒ ಪಿ.ಕೆ. ಮಾಧವ್ ರಾಜೀನಾಮೆ
ಭಾರ್ತಿಏರ್‌ಟೆಲ್‌ನಿಂದ ಐಪಿಟಿವಿ ಸೇವೆ ಆರಂಭ
ಐಸಿಐಸಿಐನಿಂದ ಬಡ್ಡಿ ದರ ಕಡಿತ:ಕಾಮತ್