ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉಭಯ ಮೇತಾಸ್‌ ಕಂಪೆನಿಗಳ ತನಿಖೆಗೆ ಆದೇಶ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಭಯ ಮೇತಾಸ್‌ ಕಂಪೆನಿಗಳ ತನಿಖೆಗೆ ಆದೇಶ
ಕಳಂಕಿತ ಸತ್ಯಂ ಕಂಪ್ಯೂಟರ್‌ ಹಾಗೂ ರಾಜು ಕುಟುಂಬ ಸಂಚಾಲಿತ ಮೆತಾಸ್ ಪ್ರಾಪರ್ಟಿಸ್ ಮತ್ತು ಮೆತಾಸ್ ಇನ್‌ಫ್ರಾಸ್ಟ್ರಕ್ಚರ್‌ ನಡುವಣ ಹೊಂದಾಣಿಕೆಗಳು ಕಂಡುಬಂದಿರುವುದರಿಂದ ಗಂಭೀರ ವಂಚನೆ ಪ್ರಕರಣವನ್ನು ತನಿಖೆ ನಡೆಸುವಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಸತ್ಯಂ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಅಧಿಕಾರಿಗಳು,ಸತ್ಯಂ ಕಂಪ್ಯೂಟರ್ಸ್ ಹಾಗೂ ಮೆತಾಸ್ ಪ್ರಾಪರ್ಟಿಸ್ ಮತ್ತು ಮೆತಾಸ್ ಇನ್‌ಫ್ರಾಸ್ಟ್ರಕ್ಚರ್ ನಡುವಣ ಆರ್ಥಿಕ ಹೊಂದಾಣಿಕೆಗಳು ಕಂಡುಬಂದಿರುವುದಾಗಿ ತಿಳಿಸಿದ್ದಾರೆ ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವ ಪಿ.ಸಿ.ಗುಪ್ತಾ ಹೇಳಿದ್ದಾರೆ.

ಮೆತಾಸ್ ಪ್ರಾಪರ್ಟಿಸ್ ಮತ್ತು ಮೆತಾಸ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿಗಳ ಮಾಹಿತಿ, ದಾಖಲೆಗಳು ಹಾಗೂ ಬ್ಯಾಂಕ್‌ ಖಾತೆ ಪುಸ್ತಕಗಳ ಬಗ್ಗೆ ಮಾಹಿತಿ ಸಂಗ್ರಹಣೆ ಅಗತ್ಯವಾಗಿದ್ದು,ತನಿಕಾಧಿಕಾರಿಗಳಿಗೆ ಅವುಗಳನ್ನು ವಶಪಡಿಸಿಕೊಳ್ಳುವಂತೆ ಆದೇಶಿಸಲಾಗಿದೆ ಎಂದು ಸಚಿವ ಗುಪ್ತಾ ತಿಳಿಸಿದ್ದಾರೆ.

ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಗೆ ಉಭಯ ಮೆತಾಸ್ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ವಿಫಲವಾದ ಏಳು ದಿನಗಳ ನಂತರ, ಸತ್ಯಂ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಸ್ಥ ರಾಮಲಿಂಗಾರಾಜು ಜನೆವರಿ 7 ರಂದು ತಮ್ಮ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿ7800 ಕೋಟಿ ರೂ.ಗಳನ್ನು ವಂಚಿಸಿರುವುದಾಗಿ ಒಪ್ಪಿಕೊಂಡಿದ್ದರು.

ಕಳೆದ ಹಲವು ವರ್ಷಗಳಿಂದ ತಾವು ಕಂಪೆನಿಯ ದಾಖಲೆಗಳನ್ನು ತಿರುಚಿರುವುದಾಗಿ ಒಪ್ಪಿಕೊಂಡು, ಮೆತಾಸ್ ಕಂಪೆನಿಗಳನ್ನು ಸತ್ಯಂನಲ್ಲಿ ವೀಲಿನಗೊಳಿಸಿ ವಾಸ್ತವದ ಲೆಕ್ಕಾಚಾರಕ್ಕೆ ಹೊಂದಾಣಿಕೆ ಮಾಡುವ ಉದ್ದೇಶ ಹೊಂದಲಾಗಿತ್ತು ಎಂದು ರಾಜು ತಿಳಿಸಿದ್ದಾರೆ

ಈಗಾಗಲೇ ಸತ್ಯಂ ಕಂಪ್ಯೂಟರ್‌ ವಂಚನೆ ಪ್ರಕರಣ ಕುರಿತಂತೆ ಗಂಭೀರ ವಂಚನೆ ಅಪರಾಧ ಪತ್ತೆ ದಳದಿಂದ ತನಿಖೆ ಆರಂಭವಾಗಿದ್ದು ಮೂರು ತಿಂಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಸರಕಾರ ತನಿಖಾಧಿಕಾರಿಗಳಿಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಿಸಿಎಸ್‌‌ಗೆ ಡುಕಾಟಿಯಿಂದ ಭಾರಿ ಮೌಲ್ಯದ ಗುತ್ತಿಗೆ
ಫಾರೆಕ್ಸ್‌: ರೂಪಾಯಿ ಮೌಲ್ಯ ಕುಸಿತ
ರಾಜು ಉನ್ನತಿಗೆ ನಾನು ಹೊಣೆಯಲ್ಲ :ರೆಡ್ಡಿ
ಬೇಡಿಕೆ ಪೂರೈಕೆಗೆ ಮತ್ತಷ್ಟು ಪ್ಯಾಕೇಜ್: ಕಮಲ್‌ನಾಥ್
ರಾಜು ಶ್ರೇಯಸ್ಸಿಗೆ ಕಾರಣ ನಾನಲ್ಲ: ರೆಡ್ಡಿ
ಎಸ್‌ಬಿಎಂಗೆ 182.59 ಕೋಟಿ ನಿವ್ವಳ ಲಾಭ