ಕೇವಲ ಒಂದು ತಿಂಗಳ ಅವಧಿಯಲ್ಲಿ ಸತ್ಯಂನ ಶೇ.4 ರಷ್ಟು ಶೇರುಗಳನ್ನು ಪಡೆದಿರುವ ಇಂಜಿನಿಯರಿಂಗ್ ದೈತ್ಯ ಕಂಪೆನಿಯಾದ ಲಾರ್ಸನ್ ಆಂಡ್ ಟೌಬ್ರೋ, ತೊಂದರೆಯಲ್ಲಿ ಸಿಲುಕಿರುವ ಸತ್ಯಂ ಐಟಿ ಕಂಪೆನಿಯನ್ನು ಖರೀದಿಸಲು ಆಸಕ್ತಿಯನ್ನು ತೋರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಎಲ್ ಆಂಡ್ ಟಿ ಮುಖ್ಯಸ್ಥ ಎ.ಎಂ.ನಾಯಕ್ ಕಾರ್ಪೋರೇಟ್ ವ್ಯವಹಾರಗಳ ಸಚಿವ ಪ್ರೇಮ್ಚಂದ್ ಗುಪ್ತಾ, ಹಾಗೂ ಕಾರ್ಯದರ್ಶಿ ಅನುರಾಗ್ ಗೋಯಲ್ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಹೂಡಿಕೆ ಕುರಿತಂತೆ ಮಾತುಕತೆ ನಡೆಸಿದ್ದಾರೆ ಎಂದು ಕಂಪೆನಿಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಲ್ ಆಂಡ್ ಟಿ ಮುಖ್ಯಸ್ಥ ಎ.ಎಂ.ನಾಯಕ್, ಸತ್ಯಂನಲ್ಲಿ ಶೇರುಗಳ ಕುರಿತಂತೆ ಕಳವಳವಾಗಿದೆ ಎಂದು ತಿಳಿಸಿದ್ದು, ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು.
ಸತ್ಯಂ ಸಂಸ್ಥಾಪಕ ರಾಮಲಿಂಗರಾಜು 7800 ಕೋಟಿ ರೂ. ವಂಚನೆ ಎಸಗಿದ ಸತ್ಯಂ ಕಂಪ್ಯೂಟರ್ ಸಂಸ್ಥೆಯನ್ನು ಖರೀದಿಸುವ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೇಯೇ ಎಂದು ಎಲ್ ಆಂಡ್ ಟಿ ವಕ್ತಾರರನ್ನು ಸುದ್ದಿಗಾರರು ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡಲು ವಕ್ತಾರರು ನಿರಾಕರಿಸಿದರು. |