ಸತ್ಯಂ ಕಂಪ್ಯೂಟರ್ ಸಂಸ್ಥೆ ಬಿಕ್ಕಟ್ಟಿನ ಸ್ಥಿತಿಯಲ್ಲಿದ್ದು ಸರಕಾರಕ್ಕೆ ಸತ್ಯಂ ಸಂಸ್ಥೆಯನ್ನು ಮಾರಾಟ ಮಾಡುವ ಉದ್ದೇಶ ಹೊಂದಿಲ್ಲವೆಂದು ಕಾರ್ಪೋರೇಟ್ ವ್ಯವಹಾರಗಳ ಸಚಿವ ಪ್ರೇಮ್ ಚಂದ್ ಗುಪ್ತಾ ಹೇಳಿದ್ದಾರೆ.
ದೇಶ ವಿದೇಶಗಳ ಹಲವು ಕಂಪೆನಿಗಳು ಸತ್ಯಂ ಕಂಪೆನಿಯನ್ನು ಖರೀದಿಸಲು ಆಸಕ್ತಿಯನ್ನು ತೋರಿಸಿದ್ದು,ಆದರೆ ಸರಕಾರ ಸತ್ಯಂ ಮಾರಾಟದ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ನೂತನ ನಿರ್ದೇಶಕ ಮಂಡಳಿಯನ್ನು ರಚಿಸಲಾಗಿದ್ದು, ಅದಕ್ಕೆ ಬಿಟ್ಟ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಸರಕಾರದ ನಿಲುವಿನ ಪ್ರಕಾರ ಸತ್ಯಂ ಮಾರಾಟ ಕುರಿತಂತೆ ಯಾವುದೇ ವಿಚಾರ ಚರ್ಚೆಯಾಗಿಲ್ಲ. ಕಂಪೆನಿ ತನ್ನ ಸ್ವಂತ ಬಲದ ಮೇಲೆ ಕಾರ್ಯನಿರ್ವಹಿಸಲಿ ಎಂದು ಪ್ರಮಾಣಿಕವಾಗಿ ಹಾರೈಸುತ್ತೇವೆ ಎಂದು ಸಚಿವ ಗುಪ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ. |