ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ: 10ಕೋಟಿ ಸರಿಪಡಿಸಲು ಶುರುವಾದ ಗೋಲ್ಮಾಲ್!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ: 10ಕೋಟಿ ಸರಿಪಡಿಸಲು ಶುರುವಾದ ಗೋಲ್ಮಾಲ್!
PTI
ರಾಷ್ಟ್ರವನ್ನೇ ಸಂಚಲನಗೊಳಿಸಿದ್ದ ಬಹುಕೋಟಿ ಹಗರಣದ ಸತ್ಯಂ ಗೋಲ್ಮಾಲ್ ಆರಂಭವಾದುದು ಹತ್ತು ಕೋಟಿರೂಪಾಯಿ ಸರಿದೂಗಿಸಲು ಎಂಬುದಾಗಿ ಹಗರಣದಲ್ಲಿ ಲೆಕ್ಕಪರಿಶೋಧಕರ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿರುವ ಐಸಿಎಐ(ಭಾರತೀಯ ಲೆಕ್ಕಪರಿಶೋಧಕರ ಸಂಘ) ಹೇಳಿದೆ.

ಸತ್ಯಂನ ಮಾಜಿ ಮುಖ್ಯಹಣಕಾಸು ಅಧಿಕಾರಿ ವಿ.ಶ್ರೀನಿವಾಸ್ ಹಾಗೂ ಪ್ರೈಸ್ ವಾಟರ್ ಹೌಸ್ ಬೆಂಗಳೂರು ಶಾಖೆಯಿಂದ ವಜಾಗೊಂಡಿರುವ ಇಬ್ಬರು ಅಧಿಕಾರಿಗಳ ವಿಚಾರಣೆಯ ಬಳಿಕ ಈ ಮಾಹಿತಿ ಬಹಿರಂಗಗೊಂಡಿದೆ.

ಐದಾರು ವರ್ಷಗಳ ಹಿಂದೆ ಕೇವಲ 10 ಕೋಟಿ ರೂಪಾಯಿ ಲೆಕ್ಕ ಸರಿದೂಗಿಸಲು ನೀಡಲಾದ ತಪ್ಪು ಲೆಕ್ಕವು ಬಳಿಕ ಪ್ರತಿ ತ್ರೈಮಾಸಿಕ ವರದಿಯಲ್ಲೂ ಬೆಳೆಯುತ್ತಾ ಹೋಗಿ ಕೊನೆಗೆ ಬೆಟ್ಟದಷ್ಟು ಬೆಳೆದು ಹತೋಟಿಗೆ ನಿಲುಕದಂತಾಯಿತು ಎಂಬುದಾಗಿ ಶ್ರೀನಿವಾಸ್ ವಿಚಾರಣೆ ವೇಳೆಗ ಬಹಿರಂಗ ಪಡಿಸಿರುವುದಾಗಿ ಐಸಿಎಐ ಅಧ್ಯಕ್ಷ ಉತ್ತಮ್ ಪ್ರಕಾಶ್ ಅಗರ್ವಾಲ್ ತಿಳಿಸಿದ್ದಾರೆ.

ಸಂಸ್ಥೆಯ ಸಂಸ್ಥಾಪಕ ಬಿ.ರಾಮಲಿಂಗಾ ರಾಜು ಹಾಗೂ ಅವರ ಸಹೋದರ ಬಿ.ರಾಮರಾಜು ಅವರೇ ಈ ತಪ್ಪುಲೆಕ್ಕದ ರೂವಾರಿಗಳು ಎಂದೂ ಅವರು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗೋಏರ್ ಸಿಇಒ ರಾಜೀನಾಮೆ
ಸಂಬಳದಲ್ಲಿ ಶೇ.7.3ರಷ್ಟು ಏರಿಕೆ: ಹೇ ಗ್ರೂಪ್
ಜಪಾನ್ ಆರ್ಥಿಕ ಉತ್ತೇಜನಕ್ಕೆ 100 ಬಿಲಿಯ ಡಾಲರ್
1 ಲಕ್ಷ ಪರಿಹಾರ ನೀಡಲು ವಿಮಾ ಸಂಸ್ಥೆಗೆ ಆದೇಶ
ಆರ್ಥಿಕ ಉತ್ತೇಜನಕ್ಕೆ 100 ಬಿಲಿಯನ್ ಡಾಲರ್: ಜಪಾನ್
ಸಾಲ, ಠೇವಣಿ ದರಗಳಲ್ಲಿ ಇನ್ನಷ್ಟು ಕಡಿತ