ನವದೆಹಲಿ: 2009ನೇ ಹಣಕಾಸು ವರ್ಷದಲ್ಲಿ ದೇಶದ ಹರಳು ಹಾಗೂ ಚಿನ್ನಾಭರಣ ಮಾರುಕಟ್ಟೆ ಶೇ.3.9ರಷ್ಟು ಕುಸಿತ ಕಾಣುವ ಸಾಧ್ಯತೆಯಿದೆ ಎಂದು ಕೈಗಾರಿಕೆಗಳ ಒಕ್ಕೂಟ ಅಸೋಚಾಮ್ ಹೇಳಿದೆ. ಬೆಲೆ ಏರಿಕೆ ಕಾರಣದಿಂದಾಗಿ ಚಿನ್ನಾಭರಣ ಹಾಗೂ ರತ್ನ, ಹರಳುಗಳ ಬೇಡಿಕೆ ದೇಶದಲ್ಲಿ ಈಗಾಗಲೇ ಇಳಿಮುಖವಾಗಿದ್ದು, 2009ನೇ ಸಾಲಿನಲ್ಲಿ ಈ ಕ್ಷೇತ್ರ ಸವಾಲುಗಳನ್ನೇ ಎದುರಿಸಬೇಕಾಗುತ್ತದೆ ಎಂದು ಅಸೋಚಾಮ್ ಹೇಳಿದೆ. |