ಮುಂಬೈ: ಹಗರಣದಿಂದ ಕಳಂಕಿತವಾಗಿರುವ ದೇಶದ ನಾಲ್ಕನೇ ಅತಿ ದೊಡ್ಡ ಸಾಫ್ಟ್ವೇರ್ ಕಂಪನಿ ಸತ್ಯಂ ಕಂಪ್ಯೂಟರ್ಸ್ ಯಾರ ತೆಕ್ಕೆಗೆ ಬರಲಿದೆ ಎಂಬುದು ಸೋಮವಾರ ಮುಂಬೈನಲ್ಲಿ ನಡೆಯುವ ಸಭೆಯಲ್ಲಿ ಪ್ರಕಟಗೊಳ್ಳಲಿದೆ. ಸತ್ಯಂನಲ್ಲಿ ಶೇ.31ರಷ್ಟು ಪಾಲು ಪಡೆಯಲು ಬಯಸುವ ಕಂಪನಿಗಳು ಸೋಮವಾರ ಬೆಳಿಗ್ಗೆ 9 ಗಂಟೆವರೆಗೂ ಬಿಡ್ ಸಲ್ಲಿಸಬಹುದು ಎಂದು ಸರ್ಕಾರ ನಿಯೋಜಿಸಿರುವ ಸತ್ಯಂ ಆಡಳಿತ ಮಂಡಳಿ ಹೇಳಿದೆ. ಬಿಡ್ ಸಲ್ಲಿಸಿದ ಕಂಪನಿಗಳ ತಾಂತ್ರಿಕ ಅಂಶಗಳನ್ನು ಮೌಲ್ಯಮಾಪನ ಮಾಡಿ, ನಂತರ ಅವು ಸಲ್ಲಿಸಿರುವ ಬಿಡ್ ದರ ತೆರೆಯಲಾಗುತ್ತದೆ ಎಂದು ಮಂಡಳಿಯ ಅಧ್ಯಕ್ಷ ಕಿರಣ್ ಕಾರ್ಣಿಕ್ ಹೇಳಿದ್ದಾರೆ. ಈಗಾಗಲೇ ಎಲ್ ಅಂಡ್ ಟಿ ಕಂಪನಿ ಸತ್ಯಂನಲ್ಲಿ 12.04ರಷ್ಟು ಪಾಲು ಹೊಂದಿದೆ. |