ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಅಭಿವೃದ್ಧಿಗೆ ಬಡ್ಡಿ ದರ ಕಡಿತ ಅಗತ್ಯ:ಜಿಂದಾಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಅಭಿವೃದ್ಧಿಗೆ ಬಡ್ಡಿ ದರ ಕಡಿತ ಅಗತ್ಯ:ಜಿಂದಾಲ್
ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದ ಅವಧಿಯಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.7.5ಕ್ಕೆ ತಲುಪಲು ಬಡ್ಡಿದರ ಕಡಿತ ಹಾಗೂ ಅಬಕಾರಿ ತೆರಿಗೆಯನ್ನು ಕಡಿತಗೊಳಿಸುವುದು ಅಗತ್ಯವಾಗಿದೆ ಎಂದು ಅಸೋಚಾಮ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಹೇಳಿದ್ದಾರೆ.

ವಿಶೇಷ ಪರಿಸ್ಥಿತಿಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಪ್ರಸ್ತುವಿರುವ ಅಬಕಾರಿ ತೆರಿಗೆಯನ್ನು ಸರಕಾರ ರದ್ದುಗೊಳಿಸಿ ಹಿಂದಿದ್ದ ಅಬಕಾರಿ ತೆರಿಗೆ ಜಾರಿಗೊಳಿಸುವುದು ಮತ್ತು ರಿಸರ್ವ್ ಬ್ಯಾಂಕ್‌‌ ಬಡ್ಡಿ ದರವನ್ನು ಏಕಂಕಿಗೆ ಸೀಮಿತಗೊಳಿಸುವುದು ಅಗತ್ಯವಾಗಿದೆ ಎಂದು ಜಿಂದಾಲ್ ಅಭಿಪ್ರಾಯಪಟ್ಟಿದ್ದಾರೆ.

ಅಬಕಾರಿ ತೆರಿಗೆ ಹಾಗೂ ಬ್ಯಾಂಕ್‌ ಬಡ್ಡಿ ದರಗಳನ್ನು ಏಕಂಕಿಗೆ ತಂದಲ್ಲಿ ಆರಂಭಿಕ ಎರಡು ತ್ರೈಮಾಸಿಕ ಅವಧಿಗಳಲ್ಲಿ ಜಿಡಿಪಿ ದರ ಶೇ.5-5.5ಕ್ಕೆ ತಲುಪಲಿದ್ದು, ಮೂರನೇ ತ್ರೈಮಾಸಿಕ ಅವಧಿಯಲ್ಲಿ ಶೇ.7.5 ರ ಗುರಿಯನ್ನು ತಲುಪಲಿದೆ ಎಂದು ತಿಳಿಸಿದ್ದಾರೆ

ಕೇಂದ್ರ ಸರಕಾರ ಘೋಷಿಸಿದ ಉತ್ತೇಜನ ಪ್ಯಾಕೇಜ್‌ಗಳಲ್ಲಿ ಕೇಂದ್ರ ಅಬಕಾರಿ ತೆರಿಗೆ ಕಡಿತ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ ಬಡ್ಡಿ ದರಗಳ ಕಡಿತದಿಂದಾಗಿ ಜಿಡಿಪಿ ದರ ಅಲ್ಪಮಟ್ಟಿಗೆ ಚೇತರಿಸಿಕೊಂಡಿದೆ ಎಂದು ಅಸೋಚಾಮ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಅಭಿಪ್ರಾಯಪಟ್ಟಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯಾಹೂ ಕಂಪೆನಿಂದ ನೂರಾರು ಉದ್ಯೋಗಿಗಳ ವಜಾ?
ಯುಬಿಎಸ್‌ನಿಂದ 8700 ಉದ್ಯೋಗಿಗಳ ವಜಾ ಸಾಧ್ಯತೆ?
ಫಾರೆಕ್ಸ್: ರೂಪಾಯಿ ಮೌಲ್ಯ ಕುಸಿತ
ಇನ್ಫೋಸಿಸ್ ಲಾಭಾಂಶದಲ್ಲಿ ಶೇ.1.71 ರಷ್ಟು ಕುಸಿತ
ಚಹದ ಬೆಲೆಯಲ್ಲೂ ಏರಿಕೆ
ಕ್ಷಿಪ್ರ ಏರಿಕೆ ಕಾಣುತ್ತಿರುವ ಸಕ್ಕರೆ ಬೆಲೆ