ಪ್ರಸಕ್ತ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದ ಅವಧಿಯಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.7.5ಕ್ಕೆ ತಲುಪಲು ಬಡ್ಡಿದರ ಕಡಿತ ಹಾಗೂ ಅಬಕಾರಿ ತೆರಿಗೆಯನ್ನು ಕಡಿತಗೊಳಿಸುವುದು ಅಗತ್ಯವಾಗಿದೆ ಎಂದು ಅಸೋಚಾಮ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಹೇಳಿದ್ದಾರೆ.
ವಿಶೇಷ ಪರಿಸ್ಥಿತಿಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಪ್ರಸ್ತುವಿರುವ ಅಬಕಾರಿ ತೆರಿಗೆಯನ್ನು ಸರಕಾರ ರದ್ದುಗೊಳಿಸಿ ಹಿಂದಿದ್ದ ಅಬಕಾರಿ ತೆರಿಗೆ ಜಾರಿಗೊಳಿಸುವುದು ಮತ್ತು ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಏಕಂಕಿಗೆ ಸೀಮಿತಗೊಳಿಸುವುದು ಅಗತ್ಯವಾಗಿದೆ ಎಂದು ಜಿಂದಾಲ್ ಅಭಿಪ್ರಾಯಪಟ್ಟಿದ್ದಾರೆ.
ಅಬಕಾರಿ ತೆರಿಗೆ ಹಾಗೂ ಬ್ಯಾಂಕ್ ಬಡ್ಡಿ ದರಗಳನ್ನು ಏಕಂಕಿಗೆ ತಂದಲ್ಲಿ ಆರಂಭಿಕ ಎರಡು ತ್ರೈಮಾಸಿಕ ಅವಧಿಗಳಲ್ಲಿ ಜಿಡಿಪಿ ದರ ಶೇ.5-5.5ಕ್ಕೆ ತಲುಪಲಿದ್ದು, ಮೂರನೇ ತ್ರೈಮಾಸಿಕ ಅವಧಿಯಲ್ಲಿ ಶೇ.7.5 ರ ಗುರಿಯನ್ನು ತಲುಪಲಿದೆ ಎಂದು ತಿಳಿಸಿದ್ದಾರೆ
ಕೇಂದ್ರ ಸರಕಾರ ಘೋಷಿಸಿದ ಉತ್ತೇಜನ ಪ್ಯಾಕೇಜ್ಗಳಲ್ಲಿ ಕೇಂದ್ರ ಅಬಕಾರಿ ತೆರಿಗೆ ಕಡಿತ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರಗಳ ಕಡಿತದಿಂದಾಗಿ ಜಿಡಿಪಿ ದರ ಅಲ್ಪಮಟ್ಟಿಗೆ ಚೇತರಿಸಿಕೊಂಡಿದೆ ಎಂದು ಅಸೋಚಾಮ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಅಭಿಪ್ರಾಯಪಟ್ಟಿದ್ದಾರೆ. |