ಕೋಲ್ಕತ್ತಾ: ಸತ್ಯಂ ಹಗರಣದ ಕುರಿತಾಗಿ ಸೆಬಿ ಲೆಕ್ಕಪರಿಶೋಧಕರ ತಂಡ ತನ್ನ ಕಾರ್ಯವನ್ನು ಮುಗಿಸುವ ನಿರೀಕ್ಷೆಯಿದೆ.
ಸೆಬಿ ಮೂಲಗಳ ಪ್ರಕಾರ, ಈಗಾಗಲೇ ಲೆಕ್ಕ ಪರಿಶೋಧನಾ ಕಾರ್ಯ ಆರಂಭಗೊಂಡದ್ದು, ಸೆಬಿ ತನ್ನ ತಂಡಕ್ಕೆ ಈ ಕಾರ್ಯವನ್ನು ಪೂರ್ಣಗೊಳಿಸಲು ನಾಲ್ಕು ವಾರಗಳ ಸಮಯ ನೀಡಿದೆ. ಹಾಗಾಗಿ ಮೇ ಅಂತ್ಯದೊಳಗೆ ಪೂರ್ಣಗೊಳಿಸುವ ಗಡುವು ತಂಡಕ್ಕಿದೆ.
ಇದಲ್ಲದೆ, ಟೆಲಿಕಾಂ, ಐಟಿ, ಬ್ಯಾಂಕಿಂಗ್, ಮಾಧ್ಯಮ, ಮನರಂಜನೆ ಹಾಗೂ ಆರ್ಥಿಕ ವಲಯದಲ್ಲಿರುವ ಸಂಸ್ಥೆಗಳ ಲೆಕ್ಕ ಪರಿಶೋಧನೆಯ್ನನೂ ಸೆಬಿ ಆರಂಭಿಸಿದ್ದು, ಇವುಗಳೂ ಮೇ ಅಂತ್ಯದೊಳಗೆ ಪೂರ್ಣಗೊಳ್ಳುವ ಭರವಸೆಯಿದೆ. ಮೂರು ಹಂತಗಳಲ್ಲಿ ಪರಿಶೋಧನೆ ನಡೆಯಲಿದ್ದು, ಪ್ರಾಥಮಿಕ, ಮಧ್ಯಂತರ ಹಾಗೂ ಅಂತಿಮ ವರದಿಗಳು ಹೊರಬೀಳಲಿವೆ. ತಂಡದ ಅಂತಿಮ ವರದಿಯನ್ನು ಸೆಬಿ ಕೂಲಂಕುಷವಾಗಿ ಪರಿಶೀಲಿಸಲಿದ್ದು, ಲೆಕ್ಕ ಪರಿಶೋಧನಾ ಕಾರ್ಯ ಭರದಿಂದ ಸಾಗಿದೆ ಎಂದು ಮೂಲಗಳು ತಿಳಿಸಿವೆ. |