ಸತ್ಯಂ ನೌಕರರಿಬ್ಬರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ಶನಿವಾರ ತಳ್ಳಿಹಾಕಿದೆ. ಸತ್ಯಂ ಹಗರಣದ ಕುರಿತಾಗಿನ ತನಿಖಾ ಸಂಸ್ಥೆಯಿಂದ ಆರೋಪಿಗಳ ಚಾರ್ಜ್ಶೀಟ್ ಸಲ್ಲಿಕೆಯಾಗಿರುವ ಈ ಹಂತದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲವೆಂದು ಮ್ಯಾಜಿಸ್ಟ್ರೇಟ್ ಹೇಳಿದೆ. ಸತ್ಯಂ ಉದ್ಯೋಗಿಗಳಾದ ವೆಂಕಟಪತಿರಾಜು ಮತ್ತು ಸಿ.ಶ್ರೀಶೈಲಮ್ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು. |