ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕತೆ ಹಂತ ಹಂತವಾಗಿ ಸುಸ್ಥಿತಿಗೆ: ಗೋಪಾಲ್‌ಕೃಷ್ಣನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕತೆ ಹಂತ ಹಂತವಾಗಿ ಸುಸ್ಥಿತಿಗೆ: ಗೋಪಾಲ್‌ಕೃಷ್ಣನ್
PTI
ಜಾಗತಿಕ ಆರ್ಥಿಕತೆ ಹಂತ ಹಂತವಾಗಿ ಕುಸಿತ ಕಂಡಂತೆ ಆರ್ಥಿಕತೆ ಮರಳಿ ಸುಸ್ಥಿತಿಗೆ ಬರಲು ಹಲವು ಹಂತಗಳು ಬೇಕಾಗುತ್ತವೆ ಎಂದು ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಗೋಪಾಲ್‌ಕೃಷ್ಣನ್ ಹೇಳಿದ್ದಾರೆ.

ದೇಶದ ಹಣಕಾಸು ಸಂಸ್ಥೆಗಳ ಆರ್ಥಿಕತೆ ಕೆಲ ಮಟ್ಟಿಗೆ ಚೇತರಿಕೆ ಕಂಡಿದ್ದು, ಸಾಲ ದೊರೆಯುತ್ತಿದೆ. ಇತರ ಕ್ಷೇತ್ರಗಳ ಆರ್ಥಿಕತೆಯಲ್ಲಿ ಸುಧಾರಣೆ ಕಂಡುಬರುತ್ತಿದ್ದು, ಆದರೆ ಯಾವ ಕ್ಷೇತ್ರ ವೇಗವಾಗ ಸುಧಾರಿಸುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ ಎಂದು ಗೋಪಾಲ್‌ಕೃಷ್ಣನ್ ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿರುವ ಜಿಇ ಮತ್ತು ಸಿಟಿ ಗ್ರೂಪ್‌ ಹಣಕಾಸು ಸಂಸ್ಥೆಗಳು ತ್ರೈಮಾಸಿಕ ಫಲಿತಾಂಶದಲ್ಲಿ ಲಾಭಾಂಶ ಹೆಚ್ಚಳವಾಗಿರುವುದು ಸಕಾರಾತ್ಮಕ ಬೆಳವಣಿಗೆ. ಇದರಿಂದಾಗಿ ಹಣಕಾಸು ಸಂಸ್ಥೆಗಳ ಮೇಲೆ ಅವಲಂಬಿತವಾದ ಮಾಹಿತಿತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಬೆಂಬಲ ದೊರೆಯಲಿದೆ ಎಂದು ನುಡಿದರು.

ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಮೂರನೇ ತ್ರೈಮಾಸಿಕದಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಮರಳಿ ವೈಭವ ಕಾಣಲಿದೆ. ಆರ್ಥಿಕತೆ ಉತ್ತಮಗೊಂಡಲ್ಲಿ ಕಂಪೆನಿಗಳು ವಿದೇಶಿ ಹೊರಗುತ್ತಿಗೆ ಸೇವಾ ವಹಿವಾಟು ಹೆಚ್ಚಿಸಲಿವೆ ಎಂದು ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಗೋಪಾಲ್‌ಕೃಷ್ಣನ್ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್: ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ
ದೇಶದ ವೃದ್ಧಿ ದರದಲ್ಲಿ ಶೀಘ್ರ ಸುಧಾರಣೆ :ಪ್ರಧಾನಿ
ನಾರಾಯಣ ಮೂರ್ತಿ ಕುಟುಂಬದ ಬೆಲೆ 4,000 ಕೋಟಿ ರೂ!
ಭಾರತದ 50 ಬಹು ಪ್ರಭಾವಿ ವ್ಯಕ್ತಿಗಳ ಪಟ್ಟಿ ಪ್ರಕಟ
ಬಡ್ಡಿ ದರ ಇಳೆಕೆ: ಆಸೋಚಾಮ್ ಆಗ್ರಹ
ಭಾರತೀಯ ಕಾಲ್ ಸೆಂಟರ್ ಮುಚ್ಚುಗಡೆ: ಡೆಲ್ಟ್ ಏರ್‌ಲೈನ್ಸ್