ಸತ್ಯಂ ಹಗರಣದ ಆರೋಪಿ ಬಿ. ರಾಮಲಿಂಗಾ ರಾಜು ಅವರ ಸೋದರ ರಾಮರಾಜು ಮತ್ತು ಶ್ರೀನಿವಾಸ್ ಅವರ ಜಾಮೀನಿನ ಕೋರಿಕೆ ಅರ್ಜಿಗಳನ್ನು ಸ್ಥಳೀಯ ಸಿಬಿಐ ಕೋರ್ಟ್ ಶನಿವಾರ ತಿರಸ್ಕರಿಸಿದೆ. ರಾಜು ಸೋದರರು ಮತ್ತು ಮಾಜಿ ಸತ್ಯಂ ಸಿಎಫ್ಒ ಶ್ರೀನಿವಾಸ್ ನ್ಯಾಯಾಂಗ ಕಸ್ಟಡಿಯಲ್ಲಿ ಈಗಾಗಲೇ 100 ದಿನಗಳನ್ನು ಕಳೆದಿರುವುದರಿಂದ ಅವರನ್ನು ಬಂಧಮುಕ್ತಗೊಳಿಸುವಂತೆ ಅವರ ಪರ ವಕೀಲರು ಕೋರಿಕೆ ಸಲ್ಲಿಸಿದ್ದರು. |