ಜಾಗತಿಕ ಆರ್ಥಿಕ ಹಿಂಜರಿತ ಕೇವಲ 2009ರಲ್ಲಿ ಮಾತ್ರವಲ್ಲ. ಮುಂದಿನ ವರ್ಷವೂ ಮುಂದುವರಿಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಡಿ.ಸುಬ್ಬರಾವ್ ಹೇಳಿದ್ದಾರೆ.ಅಂತಾರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿಶ್ವಬ್ಯಾಂಕ್ನ ಸಭೆಯಲ್ಲಿ ಮಾತನಾಡಿದ ಅವರು, ಸದ್ಯದ ಯೋಜನಾ ನೀತಿಗಳಿಂದಾಗಿ ಆರ್ಥಿಕ ಹಿಂಜರಿತ ದುಸ್ಥಿತಿಯತ್ತ ತೆರಳುತ್ತಿಲ್ಲ. 2009ರವರೆಗೆ ಇದು ಹಾಗೇ ಇರಲಿದೆ. ಆದರೆ ಯೋಜನೆಗಳು ಫಲ ನೀಡದಿದ್ದರೆ, ಹಿಂಜರಿತ ಮತ್ತೆ ಕಾಣುವ ಸಂಭವವಿದೆ ಎಂದು ಅವರು ಅಭಿಪ್ರಾಯಪಟ್ಟರು.2008-09 ರಲ್ಲಿ ಭಾರತ ಶೇ.6.5ರಿಂದ 6.7ರಷ್ಟು ಬೆಳವಣಿಗೆ ಕಾಣಬೇಕಿತ್ತು. ಹಾಗೂ 2009-10ರಲ್ಲಿ ಜಿಡಿಪಿ ಶೇ.6ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದರು.ಸದ್ಯ ಬ್ಯುಸಿನೆಸ್ ವಲಯದಲ್ಲಿ ಆಶಾದಾಯಕ ಚಿಗುರು ಕಾಣುತ್ತಿದೆ. ಆದರೆ, ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಣಕಾಸಿನ ಒತ್ತಡವೂ ಹೆಚ್ಚಾಗಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು. |