ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕೇಂದ್ರದಿಂದ ಮತ್ತಷ್ಟು ಪ್ಯಾಕೇಜ್‌ ಘೋಷಣೆ ಅಗತ್ಯ:ಎಫ್‌ಐಸಿಸಿಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇಂದ್ರದಿಂದ ಮತ್ತಷ್ಟು ಪ್ಯಾಕೇಜ್‌ ಘೋಷಣೆ ಅಗತ್ಯ:ಎಫ್‌ಐಸಿಸಿಐ
ಮುಂದಿನ ತಿಂಗಳು ಕೇಂದ್ರದಲ್ಲಿ ಅಧಿಕಾರರೂಢವಾಗುವ ಸರಕಾರ ವಹಿವಾಟು ಚೇತರಿಕೆಗೆ ತೆರಿಗೆ ವಿನಾಯತಿ ಹೊರತುಪಡಿಸಿ ಮತ್ತಷ್ಟು ಉತ್ತೇಜನ ಪ್ಯಾಕೇಜ್‌ಗಳನ್ನು ಘೋಷಿಸುವುದು ಅಗತ್ಯವಾಗಿದೆ ಎಂದು ಕೈಗಾರಿಕೋದ್ಯಮ ಸಂಘಟನೆಯಾದ ಎಫ್‌ಐಸಿಸಿಐ ಹೇಳಿದೆ.

ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರುವ ನೂತನ ಸರಕಾರ ಹಿಂದಿನ ಸರಕಾರ ಘೋಷಿಸಿದ ಉತ್ತೇಜನ ಪ್ಯಾಕೇಜ್‌ಗಳನ್ನು ಮುಂದುವರಿಸಿದರಷ್ಟೆ ಸಾಲದು. ಮೂಲಸೌಕರ್ಯ ಹಾಗೂ ಬಿಕ್ಕಟ್ಟು ಎದುರಿಸುತ್ತಿರುವ ಕ್ಷೇತ್ರಗಳಿಗೆ ಅಗತ್ಯವಾದ ಆರ್ಥಿಕ ಚೇತರಿಕೆಗಾಗಿ ಹೊಸ ಪ್ಯಾಕೇಜ್‌ಗಳನ್ನು ಘೋಷಿಸಬೇಕಾಗುತ್ತದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ 2003 - 2008 ರವರೆಗೆ ಹೂಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ಆರ್ಥಿಕ ಅಭಿವೃದ್ಧಿಯಲ್ಲಿ ಏರಿಕೆಯಾಗಿದೆ ಎಂದು ಚೇಂಬರ್ ಅಂಕಿ ಅಂಶಗಳ ಸಮೇತ ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರದಲ್ಲಿದ್ದ ಹಿಂದಿನ ಸರಕಾರ ಕಳೆದ ಎರಡು ವರ್ಷಗಳಲ್ಲಿ ತೆರಿಗೆ ದರಗಳನ್ನು ಪರಿಷ್ಕರಿಸಿ ವಿನಾಯತಿಯನ್ನು ನೀಡಿರುವುದು ಸ್ವಾಗತಾರ್ಹ. ಆದರೆ ಮತ್ತಷ್ಟು ಪ್ಯಾಕೇಜ್‌ಗಳನ್ನು ಘೋಷಿಸುವ ಅಗತ್ಯವಿತ್ತು ಎಂದು ಪ್ರತಿಪಾದಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೂಕ್ತ ಸಮಯದಲ್ಲಿ ಅಧಿಕಾರ ಸ್ವೀಕರಿಸಿದ್ದೇನೆ:ಕೋಚರ್
2010ರಲ್ಲಿ ಹೊಸ ಗ್ರಾಹಕ ಬೆಲೆ ಸೂಚ್ಯಂಕ ನಿಗದಿ
ದೇಶದಲ್ಲಿ ಹೊಸದಾಗಿ 15,300 ಎಟಿಎಂ
ಸಕ್ಕರೆ ಆಮದು: ಕೇಂದ್ರ ಸರ್ಕಾರ ತೀರ್ಮಾನ
ಇನ್ಫೋಸಿಸ್ ಹೆಚ್ಚುವರಿ ನಿರ್ದೇಶಕರಾಗಿ ಕಾಮತ್‌
ಕೇಂದ್ರಕ್ಕೆ ಚು. ಆಯೋಗ ನೋಟಿಸು