ಲೋಕಸಭೆ ಚುನಾವಣೆ ಅಂತಿಮ ಹಂತದಲ್ಲಿದ್ದು, ಫಲಿತಾಂಶ ಹೊರಬಿದ್ದ ನಂತರ ಮೇ ಅಥವಾ ಜೂನ್ ಅಂತ್ಯದೊಳಗೆ ನೂತನ ಸರ್ಕಾರ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲಿರುವ ಹಿನ್ನೆಲೆಯಲ್ಲಿ ನೂತನ ವಿತ್ತ ಸಚಿವರು 2009-10ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗಾಗಿ ವಿತ್ತ ಸಚಿವಾಲಯ ಬಿರುಸಿನ ಕಾರ್ಯದಲ್ಲಿ ತೊಡಗಿದೆ.
ಕಳೆದ ಐದು ವರ್ಷಗಳಿಂದ ಕೇಂದ್ರದ ಅಧಿಕಾರದ ಗದ್ದುಗೆಯಲ್ಲಿದ್ದ ಯುಪಿಎ ಅವಧಿ ಪೂರ್ಣಗೊಂಡಿದೆ. ಆ ನಿಟ್ಟಿನಲ್ಲಿ ಫೆಬ್ರುವರಿ 16ರಂದು ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದರು. ಪ್ರಧಾನಿ ಗೈರು ಹಾಜರಿಯಲ್ಲಿ ಪ್ರಣಬ್ ಮುಖರ್ಜಿ ಅವರು ಮಂಡಿಸಿದ ಬಜೆಟ್ ಪೂರ್ಣವರ್ಷದ ಅಂದಾಜನ್ನು ಘೋಷಿಸಲಾಗಿತ್ತು.
ಆದರೆ ಕೇಂದ್ರದ ಯುಪಿಎ ಅಧಿಕಾರವಧಿ ಪೂರ್ಣಗೊಳ್ಳಲಿದ್ದು, ಅದು ಮಧ್ಯಂತರ ಬಜೆಟ್ ಮಾತ್ರ ಮಂಡಿಸಿದೆ. ಆ ನೆಲೆಯಲ್ಲಿ ಮೇ ತಿಂಗಳ ಅಂತ್ಯದಲ್ಲಿ ರಚನೆಗೊಳ್ಳುವ ನೂತನ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಬೇಕು ಎಂದು ಇಂಡಸ್ಟ್ರೀ ಚೆಂಬರ್ಸ್ ಅಭಿಪ್ರಾಯ ವ್ಯಕ್ತಪಡಿಸಿದೆ. ಆ ಕಾರಣಕ್ಕಾಗಿ ಎಫ್ಐಸಿಸಿಐ ಮೇ 13ರಂದು ಇಂಡಸ್ಟ್ರೀ ಮಂಡಳಿಯ ಸಭೆಯನ್ನು ಕರೆದಿದೆ. |