ಸತ್ಯಂ ಕಂಪೆನಿಯಿಂದ ವಂಚನೆಗೊಳಗಾದ 3ಲಕ್ಷ ಶೇರುದಾರರಿಗೆ ವಾಪಸು ಬರಬೇಕಾಗಿದ್ದ 4,987.5ಕೋಟಿ ರೂ.ಗಳ ಪರಿಹಾರ ಮೊತ್ತದ ವಿಚಾರಣೆ ಅರ್ಜಿಯನ್ನು ಆಲಿಸಲು ರಾಷ್ಟ್ರೀಯ ಗ್ರಾಹಕರ ವೇದಿಕೆ ಸೋಮವಾರ ನಿರಾಕರಿಸಿದೆ.
ನ್ಯಾಷನಲ್ ಕನ್ಸೂಮರ್ ಡಿಸ್ಪ್ಯೂಟ್ಸ್ ರಿಡ್ರೆಸ್ಸೆಲ್ ಕಮಿಷನ್ಗೆ ಶೇರುದಾರರಿಗೆ ಪರಿಹಾರ ಒದಗಿಸುವಂತೆ ಹೂಡಿಕೆದಾರರ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿದೆ. ಅಲ್ಲದೇ ಈ ಪ್ರಕರಣದಲ್ಲಿ ಶೇರುದಾರರ ಬೇಡಿಕೆಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಶೇರುದಾರರ ಮಂಡಳಿ ನೀಡಿರುವ ಅರ್ಜಿಯನ್ವಯ ನಾವು ಮೂಲಭೂತವಾಗಿ ಯಾವುದೇ ಒಪ್ಪಂದ ಮಾಡಿಕೊಳ್ಳುವ ಸಾಧ್ಯವಿಲ್ಲ. ಈಗಾಗಲೇ ಸಿಬಿಐ ಹಾಗೂ ಸಿಎಲ್ಬಿ ಈ ಎಲ್ಲಾ ವಿಷಯವನ್ನು, ವಸ್ತುವನ್ನು ತಮ್ಮ ವಶಕ್ಕೆ ತೆಗೆದುಕೊಂಡಿವೆ ಎಂದು ಗ್ರಾಹಕ ವೇದಿಕೆಯ ನ್ಯಾಯಮೂರ್ತಿ ಕೆ.ಎಸ್.ಗುಪ್ತಾ ತಿಳಿಸಿದರು.
|