ಲಕ್ಷಾಂತರ ಮಂದಿಯನ್ನು ವಂಚಿಸಿದ ಸತ್ಯಂ ಕಂಪ್ಯೂಟರ್ಸ್ನ ವಂಚನೆಯಲ್ಲಿ ತನ್ನದೇನೂ ಪಾತ್ರವಿಲ್ಲ ಮಾಜಿ ಆಡಳಿತ ನಿರ್ದೇಶಕ ಬಿ.ರಾಮ ರಾಜು ಸೋಮವಾರ ಜಾಮೀನಿಗಾಗಿ ಹೆಚ್ಚುವರಿ ಸೆಶನ್ಸ್ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಮಂಡಿಸಿದ ವಾದವಿದು.
ಸತ್ಯಂ ಸಂಸ್ಥಾಪಕ ಬಿ.ರಾಮಲಿಂಗಾರಾಜು, ಸಹೋದರ ರಾಮರಾಜು ಹಾಗೂ ಸತ್ಯಂ ಕಂಪೆನಿಯ ಮಾಜಿ ಸಿಇಓ ವಡ್ಲಮಣಿ ಶ್ರೀನಿವಾಸ್ ಅವರ ಜಾಮೀನು ಅರ್ಜಿಯನ್ನು ಸಿಬಿಐ ಕೋರ್ಟ್ ತಿರಸ್ಕರಿಸಿದ ಬಳಿಕ, ಇದೀಗ ನ್ಯಾಂಪಲ್ಲಿ ಕ್ರಿಮಿನಲ್ ಕೋರ್ಟ್ ಕಾಂಪ್ಲೆಕ್ಸ್ನಲ್ಲಿನ 1v ಹೆಚ್ಚುವರಿ ಮೆಟ್ರೋಪೊಲಿಟಿನ್ ಸೆಶನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ರಾಮಲಿಂಗಾರಾಜು ಹಾಗೂ ವಡ್ಲಮಣಿ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮಂಗಳವಾರ ನಡೆಸುವುದಾಗಿ ಹೇಳಿದೆ. ಸತ್ಯಂ ಮಹಾವಂಚನೆಯಲ್ಲಿ ತಮ್ಮ ಕಕ್ಷಿದಾರರು ಪಾಲುದಾರರಲ್ಲ ಎಂದು ರಾಮರಾಜು ಅವರ ಸುಪ್ರೀಂಕೋರ್ಟ್ ವಕೀಲರಾದ ಆರ್.ಕೆ.ಹಾಂಡೂ ತಿಳಿಸಿದ್ದಾರೆ. |