ಮಹಾವಂಚಕ ಕಂಪೆನಿಯಾದ ಸತ್ಯಂನಿಂದ ನಾಲ್ಕು ಉನ್ನತ ಹುದ್ದೆಯ ಅಧಿಕಾರಿಗಳು ಕಂಪೆನಿಯಿಂದ ಹೊರಬಂದಿದ್ದು, ಅವರಂತೆಯೇ ಉಳಿದ ಹಿರಿಯ ಅಧಿಕಾರಿಗಳು ಕೂಡ ಅದೇ ಹಾದಿಯನ್ನು ಅನುಸರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಂಪೆನಿಯ ಹಿರಿಯ ಉಪಾಧ್ಯಕ್ಷ ವೀರೇಂದ್ರ ಅಗರ್ವಾಲ್ ಮತ್ತು ಗಾರಿ ತೀಲುಕ್ ಸಿಂಗ್ ಅವರು ಸತ್ಯಂ ಕಂಪೆನಿಯನ್ನು ತೊರೆದು ಮಹೀಂದ್ರ ಕಂಪೆನಿ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ. ಅಗರ್ವಾಲ್ ಅವರು ಏಷಿಯಾ ಪೆಸಿಫಿಕ್ ಹಾಗೂ ಮಧ್ಯ ಈಸ್ಟ್ ವಲಯದ ಬ್ಯುಸಿನೆಸ್ ಘಟಕದ ಮುಖ್ಯಸ್ಥರಾಗಿದ್ದರು. ಅಮೆರಿಕ, ಕೆನಡಾ, ಲ್ಯಾಟಿನ್ ಅಮೆರಿಕ ಹಾಗೂ ಕೆರ್ರೆಬಿಯನ್ ಭಾಗದ ಸತ್ಯಂನ ಹಿರಿಯ ಉಪಾಧ್ಯಕ್ಷರಾಗಿ ಸಿಂಗ್ ಕಾರ್ಯನಿರ್ವಹಿಸಿದ್ದರು.
ಅಲ್ಲದೇ ಸತ್ಯಂನ ಮತ್ತಿಬ್ಬರು ಪ್ರಮುಖ ಅಧಿಕಾರಿಗಳಾದ ಕ್ರಿಷ್ ಕುಮಾರಸ್ವಾಮಿ ಹಾಗೂ ರಮೇಶ್ ಬಾಬು ಕೂಡ ಕಂಪೆನಿಗೆ ಗುಡ್ ಬೈ ಹೇಳಿದ್ದು,ಎಚ್ಸಿಎಲ್ಗೆ ಸೇರ್ಪಡೆಯಾಗುತ್ತಿರುವುದಾಗಿ ಬಲ್ಲ ಮೂಲಗಳು ವಿವರಿಸಿವೆ. |