ಸತ್ಯಂ ಕಂಪೆನಿಯ ಸಂಸ್ಥಾಪಕ ಬಿ.ರಾಮಲಿಂಗಾರಾಜು ಹಾಗೂ ಉಳಿದ ಏಳು ಮಂದಿಯ ನ್ಯಾಯಾಂಗ ಬಂಧನವನ್ನು ಮತ್ತೆ 14ದಿನಗಳವರೆಗೆ ಸ್ಥಳೀಯ ನ್ಯಾಯಾಲಯ ವಿಸ್ತರಿಸಿರುವುದಾಗಿ ಬುಧವಾರ ತಿಳಿಸಿದೆ.
ನಗರದ ಅಡಿಶನಲ್ ಮುಖ್ಯ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ ಕೆ.ಸುಧಾಕರ್ ಅವರು, ರಾಜು ಸಹೋದರ ವಡ್ಲಮಣಿ ಶ್ರೀನಿವಾಸ್, ಇಬ್ಬರು ಲೆಕ್ಕಪರಿಶೋಧಕರಾದ ಎಸ್.ಗೋಪಾಲಕೃಷ್ಣ, ತಲ್ಲೂರಿ ಶ್ರೀನಿವಾಸ್ ಹಾಗೂ ಮೂರು ಮಂದಿ ನೌಕರರಿಗೆ ಮೇ 27ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿರುವುದಾಗಿ ಹೇಳಿದರು.
ರಾಮಲಿಂಗಾರಾಜು ಸೇರಿದಂತೆ ಎಲ್ಲಾ ಎಂಟು ಆರೋಪಿಗಳನ್ನು ಚಂಚಲಗುಡಾ ಜೈಲಿನಿಂದ ನ್ಯಾಯಾಲಯಕ್ಕೆ ಕರೆ ತರಲಾಯಿತು. ಬಹುಕೋಟಿ ವಂಚನೆಯಿಂದಾಗಿ ಸತ್ಯಂ ಕಂಪ್ಯೂಟರ್ ಕಂಪೆನಿ ಜಾಗತಿಕವಾಗಿ ಕುಖ್ಯಾತಿ ಪಡೆದಿತ್ತು.
|