ಕರ್ನಾಟಕದ ಹಣಕಾಸು ಸ್ಥಿತಿಗತಿ ಕುರಿತಂತೆ ಆರ್.ಬಿ.ಐ ಗವರ್ನರ್ ಡಾ.ಡಿ.ಸುಬ್ಬರಾವ್ ಅವರು ಪ್ರಶಂಸೆ ವ್ಯಕ್ತಪಡಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಅಲ್ಲದೇ ರಾಜ್ಯ ಸರ್ಕಾರದ ಹಣಕಾಸು ಸ್ಥಿತಿಗತಿ ಸೇರಿದಂತೆ ಇಲಾಖೆಗಳ ಸಾಧನೆಯ ವಿವರವನ್ನು ಸದ್ಯದಲ್ಲಿ ರಾಜ್ಯದ ಜನತೆಯ ಮುಂದಿಡುವುದಾಗಿ ಅವರು ಹೇಳಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಾದ ಆರ್ಥಿಕ ಹಿಂಜರಿತದ ಪ್ರಭಾವವು ಕೇಂದ್ರ ಸರ್ಕಾರದ ಮೇಲೆ ಬೀರಿದೆ. ಸಹಜವಾಗಿಯೇ ರಾಜ್ಯ ಸರ್ಕಾರವು ಹಿಂಜರಿತದ ಪ್ರಭಾವಕ್ಕೊಳಗಾಗಿದೆ ಎಂದರು.
ರಾಜ್ಯದ ಹಣಕಾಸು ಸ್ಥಿತಿಗತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂಬ ಪ್ರತಿಪಕ್ಷಗಳ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಪ್ರತಿಪಕ್ಷಗಳು ರಾಜ್ಯದ ಜನತೆಯ ದಿಕ್ಕುತಪ್ಪಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. |