ದೇಶದ ಕೆಲವೊಂದು ಕ್ಷೇತ್ರಗಳಲ್ಲಿನ ಆರ್ಥಿಕ ಸ್ಥಿತಿ ಚೇತರಿಕೆಯನ್ನು ಕಾಣುತ್ತಿದ್ದು, ಉತ್ತಮ ಧಾರಣೆಯ ಸ್ಥಿರತೆಯೊಂದಿಗೆ ಗ್ರೊಥ್ನ ಹಾದಿ ಆಶಾಭಾವ ಮೂಡಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಡಿ.ಸುಬ್ಬಾರಾವ್ ಗುರುವಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್ಥಿಕ ಚೇತರಿಕೆ ಹೊಡೆತಕ್ಕೆ ಭಾರತ ಸಡ್ಡು ಹೊಡೆಯಲು ಸ್ವಲ್ಪ ಮಟ್ಟಿನ ಹಿನ್ನಡೆ ಅನುಭವಿಸಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಆದರೆ ಭಾರತ ಶೀಘ್ರವೇ ದೃಢವಾಗಿ ಈ ಹೊಡೆತವನ್ನು ಮೆಟ್ಟಿನಿಲ್ಲಲಿದೆ ಎಂಬ ವಿಶ್ವಾಸ ಇದೆ ಎಂದರು.
ಮೊದಲು ಜಾಗತಿಕವಾಗಿ ಆರ್ಥಿಕ ಚೇತರಿಕೆ ಕಾಣಬೇಕಾಗಿದೆ, ಆದರೆ ಒಂದು ಬಾರಿ ನಾವು ಕೂಡ ಆರ್ಥಿಕ ಚೇತರಿಕೆ ಬೆನ್ನತ್ತಿದಲ್ಲಿ ಶೀಘ್ರವಾಗಿ ಆಗಲಿದೆ ಎಂದು ಹೇಳಿದರು.
ಮೂಲಭೂತ ಹೂಡಿಕೆ, ಉತ್ಪಾದನೆ ಹಾಗೂ ಸೇವಾ ಕ್ಷೇತ್ರಗಳಲ್ಲಿ ಶೀಘ್ರವಾಗಿ ಮೊದಲು ಚೇತರಿಕೆ ಕಾಣುವಂತಾಗಬೇಕು ಎಂದು ಬೆಂಗಳೂರಿನಲ್ಲಿ ಕೈಗಾರಿಕೋದ್ಯಮಿಗಳ ಸಮಾರಂಭವೊಂದರಲ್ಲಿ ಭಾಗವಹಿಸಿ ಮಾತನಾಡುತ್ತ ತಿಳಿಸಿದರು. |