ಜಾಗತಿಕ ಆರ್ಥಿಕ ಹಿಂಜರಿತದ ಬಿಸಿ ಇನ್ನೂ ಚೇತರಿಕೆ ಕಾಣದೆ ಇರುವ ಹಿನ್ನೆಲೆಯಲ್ಲಿ ನೂತನವಾಗಿ ಅಧಿಕಾರದ ಗದ್ದುಗೆಗೆ ಏರಲಿರುವ ಯುಪಿಎ ಸರ್ಕಾರ ಮತ್ತಷ್ಟು ಹೋರಾಡಬೇಕಾದ ಅನಿರ್ವಾಯತೆ ಎದುರಾಗಿದೆ.
ಮೂಲಭೂತ ಸೌಕರ್ಯ ಹಾಗೂ ಜೀವವಿಮಾ ಸೇರಿದಂತೆ ಆರ್ಥಿಕ ಸಂಸ್ಥೆಗಳ ಆರ್ಥಿಕ ಚೇತರಿಕೆ ಕುರಿತಂತೆ ನೂತನ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಜವಾಬ್ದಾರಿ ಮುಂದುವರಿದಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆ ನಿಟ್ಟಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಶೀಘ್ರವಾಗಿ ಮೂಲಭೂತ ಸೌಕರ್ಯ ಅಭಿವೃದ್ಧಿಯನ್ನು ಸರ್ಕಾರ ಕೈಗೆತ್ತಿಕೊಳ್ಳಬೇಕು, ಹಾಗೇ ಆರ್ಥಿಕ ಸಂಸ್ಥೆಗಳ ಆರ್ಥಿಕ ಚೇತರಿಕೆಗೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಖ್ಯಾತ ಆರ್ಥಿಕ ತಜ್ಞ ಓಂಕಾರ್ ಗೋಸ್ವಾಮಿ ತಿಳಿಸಿದ್ದಾರೆ.
ಜೀವವಿಮಾದ ಕಾನೂನು ಮಸೂದೆ ಜಾರಿಗಾಗಿ ಕಳೆದ ವರ್ಷ ರಾಜ್ಯಸಭೆಯ ಮುಂದೆ ಬಂದಿತ್ತಾದರೂ ಅದಕ್ಕೆ ಅಂತಿಮ ಅಂಕಿತ ದೊರೆತಿಲ್ಲವಾಗಿತ್ತು. ಈ ನೂತನ ಮಸೂದೆಯನ್ನು ಸಂಸತ್ ಸ್ಥಾಯಿ ಸಮಿತಿ ಶಿಫಾರಸು ಮಾಡಿತ್ತು. |