ಕೇಂದ್ರದಲ್ಲಿ ರಚನೆಯಾಗುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿ ಮುಂದುರಿಯಲಿದ್ದು, ಸಚಿವ ಸಂಪುಟ ಸೇರಿಕೊಳ್ಳಲು ಪೈಪೋಟಿ ಆರಂಭವಾಗಿದೆ.
ಯೋಜನಾ ಆಯೋಗದ ಅಧ್ಯಕ್ಷರಾಗಿರುವ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು ಮುಂದಿನ ಹಣಕಾಸು ಸಚಿವರಾಗಬೇಕು ಹಾಗೂ ಪಿ.ಚಿದಂಬರಂ ಅವರು ಗೃಹಸಚಿವರಾಗಿ ಮುಂದುವರಿಯಬೇಕು ಎಂಬುದು ರಾಜಧಾನಿ ಮಾರುಕಟ್ಟೆ ತಜ್ಞ ಪ್ರಥ್ವಿ ಹಾಲ್ಡೆಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಅಹ್ಲುವಾಲಿಯಾ ಅವರು ಕೇಂದ್ರದಲ್ಲಿ ಹಣಕಾಸು ಸಚಿವರಾದರೆ, ಪ್ರಧಾನ ಮಂತ್ರಿ ಸಿಂಗ್ ಅವರ ರೀತಿಯಲ್ಲೇ ರಾಜ್ಯಸಭಾ ಮೂಲಕ ಅವರು ಸಚಿವ ಸಂಪುಟ ಸೇರ್ಪಡೆಗೊಳ್ಳಲಿದ್ದಾರೆ. ಅಲ್ಲದೇ ರಾಹುಲ್ ಗಾಂಧಿ ಅವರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳಬೇಕು ಎಂಬ ಒತ್ತಾಯ ಸಹ ಕೇಳಿಬರುತ್ತಿದೆ. |