ನೂತನವಾಗಿ ಆಸ್ತಿತ್ವಕ್ಕೆ ಬರಲಿರುವ ಯುಪಿಎ ಸರ್ಕಾರ ಮೂರು ತಿಂಗಳೊಳಗೆ ಆರ್ಥಿಕ ಉತ್ತೇಜನದ ಪ್ಯಾಕೇಜ್ ಅನ್ನು ಘೋಷಿಸದಿದ್ದರೆ ಬ್ಯಾಂಕ್ ಬಡ್ಡಿದರದಲ್ಲಿ 2ಶೇ.ದಷ್ಟು ಕುಸಿತ ಕಾಣುವ ಸಾಧ್ಯತೆ ಇರುವುದಾಗಿ ಬ್ಯಾಂಕಿಂಗ್ ಕ್ಷೇತ್ರದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಆರ್ಥಿಕ ಹಿಂಜರಿತವನ್ನು ತಡೆದು, ದೇಶೀಯ ಬ್ಯಾಂಕುಗಳ ಆರ್ಥಿಕ ಸ್ಥಿತಿಯನ್ನು ನೂತನ ಸರ್ಕಾರ ಕ್ರಮ ಕೈಗೊಳ್ಳಬೇಕಾದ ಅನಿರ್ವಾಯತೆ ಇದೆ. ಈಗಾಗಲೇ ಹಲವು ಸೆಕ್ಟರ್ಗಳಿಗೆ ಆರ್ಥಿಕ ಉತ್ತೇಜನದ ದೃಷ್ಟಿಯಿಂದ ಪ್ಯಾಕೇಜ್ ನೀಡಲಾಗಿದೆ.
ಆ ನಿಟ್ಟಿನಲ್ಲಿ ಸರ್ಕಾರ ಪಬ್ಲಿಕ್ ಪ್ರೈವೇಟ್ ಪಾರ್ಟನರ್ಷಿಪ್ (ಪಿಪಿಪಿ) ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಬೇಕು ಎಂದು ಬ್ಯಾಂಕಿಂಗ್ ವಲಯ ವಿವರಿಸಿದೆ. ಆರ್ಥಿಕ ಹಿಂಜರಿತಕ್ಕೆ ಸಕಾಲದಲ್ಲಿ ನೆರವು ನೀಡದಿದ್ದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಸಾಕಷ್ಟು ಹೊಡೆತ ಅನುಭವಿಸಲಿದೆ. ಅಲ್ಲದೇ ಬಡ್ಡಿದರದಲ್ಲಿಯೂ ಕಡಿತವಾಗಲಿದೆ.
|