ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಸೇರಿದಂತೆ ಆಯೋಗದ ಸದಸ್ಯರು ಸೋಮವಾರ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು.
ನಾವು ನಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿರುವುದಾಗಿ ಅಹ್ಲುವಾಲಿಯಾ ಇಲ್ಲಿನ ಯೋಜನಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. ಅಭಿಜಿತ್ ಸೇನ್, ಪಾರಿಖಾ, ಅನ್ವರ್ ಉಲ್ ಹೋಡಾ, ವಿ.ಎಲ್.ಛೋಪ್ರಾ, ಬಿ.ಮುಂಗೇಕರ್, ಸೈಯದ್ ಹಮೀದ್, ಬಿ.ಎನ್.ಯುಗಾಂಧರ್ ಹಾಗೂ ಬಿ.ಕೆ.ಚುತುರ್ವೇದಿ ಸೇರಿದಂತೆ ಯೋಜನಾ ಆಯೋಗದ ಎಲ್ಲಾ ಸದಸ್ಯರು ರಾಜೀನಾಮೆ ನೀಡಿದ್ದಾರೆ.
2004ರ ಸಾಲಿನ ಯುಪಿಎ ಮೈತ್ರಿಕೂಟದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಇಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ಯೋಜನಾ ಆಯೋಗದ ಸದಸ್ಯರನ್ನು ಪ್ರಧಾನಿ ಸಿಂಗ್ ಅವರು ಆಯ್ಕೆಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕ್ಯಾಬಿನೆಟ್ ಸಚಿವರು, ಆಯೋಗದ ಉಪಾಧ್ಯಕ್ಷರು, ಸದಸ್ಯರು ಸಾಮೂಹಿಕವಾಗಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. |