ವೇತನ ಪರಿಷ್ಕರಣೆ ಕುರಿತಂತೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಳೆದ ಎರಡು ದಿನಗಳಿಂದ ಮಹಾನಗರ್ ಟೆಲಿಫೋನ್ ನಿಗಮ್ ಲಿಮಿಟೆಡ್ ಕಾರ್ಯನಿರ್ವಾಹಕ ಸಂಘಟನೆ (ಎಂಟಿಎನ್ಎಲ್) ನಡೆಸುತ್ತಿದ್ದ ಬಂದ್ ಅನ್ನು ಬುಧವಾರ ಕೈಬಿಟ್ಟಿರುವುದಾಗಿ ತಿಳಿಸಿದೆ.
ಮಹಾನಗರ್ ಟೆಲಿಫೋನ್ ನಿಗಮ್ ಲಿಮಿಟೆಡ್ ನೌಕರರು ಮತ್ತು ಆಡಳಿತಮಂಡಳಿ ನಡುವೆ ವೇತನ ಪರಿಷ್ಕರಣೆ ಕುರಿತಂತೆ ಒಪ್ಪಂದದ ಮಾತುಕತೆ ನಡೆದಿರುವ ಹಿನ್ನೆಲೆಯಲ್ಲಿ ಬಂದ್ ಕೈಬಿಟ್ಟಿರುವುದಾಗಿ ಸಂಘಟನೆ ಹೇಳಿದೆ.
ನೌಕರರ ಎಲ್ಲಾ ಸಮಸ್ಯೆಗಳು ಪರಿಹಾರ ಕಂಡಿರುವ ಕಾರಣ, ಬಂದ್ ಕೈಬಿಡಲಾಗಿದೆ. ಅಲ್ಲದೇ ಕಳೆದ ಎರಡು ದಿನಗಳಿಂದ ಟೆಲಿಫೋನ್ ಸಂಪರ್ಕವನ್ನು ಎಂದಿನಂತೆ ಮುಂದುವರಿಯಲಿದ್ದು, ನೌಕರರು ಕರ್ತವ್ಯಕ್ಕೆ ಶೀಘ್ರವೇ ಹಾಜರಾಗಿರುವುದಾಗಿ ಎಂಟಿಎನ್ಎಲ್ನ ಆರ್ಎಸ್ಪಿ ಸಿನ್ನಾ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಬಂದ್ನಿಂದಾಗಿ ಆಸ್ಪತ್ರೆ, ಬ್ಯಾಂಕ್ ಹಾಗೂ ವಿಮಾನನಿಲ್ದಾಣ ಸೇರಿದಂತೆ ಪ್ರಮುಖ ಸಾರ್ವಜನಿಕ ಸೇವಾ ಸಂಸ್ಥೆಗಳ ದೂರವಾಣಿ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿ, ಸಾರ್ವಜನಿಕರಿಗೆ, ಸಂಸ್ಥೆಗಳಿಗೆ ಸಾಕಷ್ಟು ತೊಂದರೆ ಉಂಟಾಗಿತ್ತು. ಸುಮಾರು 4ಸಾವಿರ ಮಂದಿ ನೌಕರರು ಏಕಕಾಲದಲ್ಲಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರ ಪರಿಣಾಣ ಅವ್ಯವಸ್ಥೆ ತಲೆದೋರಿತ್ತು.
|