ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂಗೆ ಮತ್ತೆ 4ನೂತನ ನಿರ್ದೇಶಕರ ನೇಮಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂಗೆ ಮತ್ತೆ 4ನೂತನ ನಿರ್ದೇಶಕರ ನೇಮಕ
ಮಹಾವಂಚನೆ ಬಳಿಕ ಸಾಕಷ್ಟು ಅಪಖ್ಯಾತಿಗೆ ಒಳಗಾಗಿದ್ದ, ಹೊರಗುತ್ತಿಗೆಯಲ್ಲಿ ದೇಶದ ನಾಲ್ಕನೇ ದೊಡ್ಡ ಕಂಪೆನಿಯಾಗಿರುವ ಸತ್ಯಂ, ಕಂಪೆನಿಯ ಕಾನೂನು ಮಂಡಳಿಯ ನಿರ್ದೇಶನದಂತೆ (ಸಿಎಲ್‌ಬಿ) ಮತ್ತೆ ನಾಲ್ಕು ಮಂದಿ ನಿರ್ದೇಶಕರನ್ನು ನೇಮಕ ಮಾಡಲಾಗಿದೆ.

ಕಂಪೆನಿಯ ಲಾ ಬೋರ್ಡ್ ಏಪ್ರಿಲ್ 16ರಂದು ನೀಡಿದ ನಿರ್ದೇಶನದಂತೆ, ವಿನೀತ್ ನಯ್ಯರ್, ಸಿ.ಪಿ.ಗುರ್ನಾನಿ, ಸಂಜಯ್ ಕಾರ್ಲಾ ಹಾಗೂ ಉಲ್ಲಾಸ್.ಎನ್.ಯಾರ್ಗೋಪ್ ಅವರನ್ನು ಸತ್ಯಂ ಕಂಪೆನಿಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ನೂತನವಾಗಿ ನೇಮಕವಾಗಿರುವ ನಿರ್ದೇಶಕರು ಜೂನ್ 1ರಿಂದಲೇ ಕರ್ತವ್ಯ ನಿರ್ವಹಿಸಲಿದ್ದಾರೆ. ಇದೀಗ ಸತ್ಯಂ ಕಂಪನಿಯ ಆಡಳಿತ ಮಂಡಳಿಯಲ್ಲಿನ ನಿರ್ದೇಶಕರ ಸಂಖ್ಯೆ 10ಕ್ಕೇರಿದೆ.

ಸತ್ಯಂನ ಹಿಂದಿನ ನಿರ್ದೇಶಕರನ್ನು ವಜಾಗೊಳಿಸಿದ ಬಳಿಕ, ಸಿಎಲ್‌ಬಿ ಜನವರಿ ತಿಂಗಳಿನಲ್ಲಿ ಕಿರಣ್ ಕಾರ್ಣಿಕ್, ದೀಪಕ್ ಪರೇಕ್, ಸಿ.ಅಚ್ಯುತನ್, ತರುಣ್ ದಾಸ್, ಎಸ್.ಬಾಲಕೃಷ್ಣ ಮಣಿಕ್ ಮತ್ತು ಟಿ.ಎನ್.ಮನೋಹರನ್ ಅವರನ್ನು ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದಲ್ಲಿ 800ಕೋಟಿ ರೂ.ಹೂಡಿಕೆ: ಎಲ್‌ಜಿ
ಬೆಂಗಳೂರು: ರೈತಮಿತ್ರ - 'ವಿಎಸ್‌ಟಿ ಶಕ್ತಿ ಟಿಲ್ಲರ್ಸ್'
ಅಪಾರ್ಟ್‌ಮೆಂಟ್ ನೋಂದಣಿ ಶುಲ್ಕ ಕಡಿತ
ಗುಜರಾತ್ ಮಾರುಕಟ್ಟೆಯತ್ತ ಏರ್‌ಸೆಲ್ ಚಿತ್ತ
ಬ್ರಿಟನ್ ಏರ್‌ವೇಸ್‌ಗೆ 590ಮಿ.ಡಾಲರ್ ನಷ್ಟ
ರಕ್ತದ ಅವಶ್ಯಕತೆ ಇದೆಯೇ? ಏರ್‌‌ಟೆಲ್‌ಗೆ ಕರೆ ಮಾಡಿ