ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ತೊಂದರೆ ಅನುಭವಿಸುತ್ತಿರುವ ಕ್ಷೇತ್ರಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ದೇಶದ ಉತ್ಪಾದಕ ಕ್ಷೇತ್ರ ನಕಾರಾತ್ಮಕ ವಲಯದಲ್ಲಿ ಸಾಗುತ್ತಿರುವುದು ಆತಂಕ ಮೂಡಿಸಿದ್ದು, ಉತ್ಪಾದಕ ಕ್ಷೇತ್ರ ಚೇತರಿಕೆಗಾಗಿ ಮುಂಬರುವ ಬಜೆಟ್ನಲ್ಲಿ ವಿಶೇಷ ಗಮನಹರಿಸಲಾಗುವುದಲ್ಲದೇ ಹಲವು ನೀತಿಗಳಲ್ಲಿ ಬದಲಾವಣೆ ತಂದು ಚೇತರಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ.6 ರಿಂದ ಶೇ.6.5 ರವರೆಗೆ ತಲುಪುವ ಸಾಧ್ಯತೆಗಳಿದ್ದು, ಕುಂಠಿತಗೊಂಡ ಕ್ಷೇತ್ರಗಳ ಏಳಿಗೆಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಆರ್ಥಿಕತೆಗೆ ಮತ್ತಷ್ಟು ಸ್ವಾತಂತ್ರ್ಯ ನೀಡುವ ಅವಕಾಶಗಳಿವೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಸಾಲ ನೀಡುವ ನೀತಿಗೆ ಸರಕಾರ ಮುಕ್ತತೆಯನ್ನು ಘೋಷಿಸಿದ್ದರೂ ಬ್ಯಾಂಕ್ಗಳ ಅನಿಶ್ಚಿತತೆ ನೀತಿಗಳಿಂದಾಗಿ ಸರಿಯಾದ ಸಮಯಕ್ಕೆ ಗ್ರಾಹಕರಿಗೆ ಸಾಲ ದೊರೆಯುತ್ತಿಲ್ಲ ಎಂದು ವಿಷಾದಿಸಿದ ಸಚಿವ ಪ್ರಣಬ್ ಮುಖರ್ಜಿ, ಬ್ಯಾಂಕ್ಗಳ ನೀತಿಗಳಲ್ಲಿ ಬದಲಾವಣೆ ಅಗತ್ಯ ಎಂದು ತಿಳಿಸಿದ್ದಾರೆ. |