ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ರಾಜು ನ್ಯಾಯಾಂಗ ಬಂಧನ ವಿಸ್ತರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ರಾಜು ನ್ಯಾಯಾಂಗ ಬಂಧನ ವಿಸ್ತರಣೆ
ಬಹುಕೋಟಿ ಹಗರಣದ ರೂವಾರಿ, ಮಾಹಿತಿ ತಂತ್ರತ್ರಾನ ಕ್ಷೇತ್ರದ ದಿಗ್ಗಜ ಕಂಪೆನಿಯಾದ ಸತ್ಯಂ ಕಂಪ್ಯೂಟರ್ಸ್‌ನ ಸಂಸ್ಥಾಪಕ ಬಿ.ರಾಮಲಿಂಗಾರಾಜು ಹಾಗೂ ಇತರ ಎಂಟು ಮಂದಿ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳವರೆಗೆ ವಿಸ್ತರಿಸಿ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿದೆ.

ರಾಮಲಿಂಗಾರಾಜು ಹಾಗೂ ಸಹೋದರ ರಾಮಾರಾಜು ಮತ್ತು ಇತರ ಆರು ಮಂದಿ ಆರೋಪಿಗಳನ್ನು ನಗರದ ಸ್ಥಳೀಯ ನ್ಯಾಯಾಲಯದ 16ನೇ ಹೆಚ್ಚುವರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಬಂಧನದ ಅವಧಿಯನ್ನು ಜೂನ್ 10 ರವರೆಗೆ ವಿಸ್ತರಿಸಲಾಗಿದೆ.

ಸತ್ಯಂ ಆರೋಪಿಗಳಾದ ಮಾಜಿ ಸಿಎಫ್‌ಒ ವಾಡ್ಲಮನಿ ಶ್ರೀನಿವಾಸ್ ಪ್ರೈಸ್ ವಾಟರ್‌ಹೌಸ್‌ನ ಇಬ್ಬರು ಲೆಕ್ಕ ಪರಿಶೋಧಕರಾದ ಎಸ್‌.ಗೋಪಾಲ್‌ ಕೃಷ್ಣನ್ ಮತ್ತು ತಲ್ಲೂರಿ ಶ್ರೀನಿವಾಸ್ ಸೇರಿದಂತೆ ಎಂಟು ಆರೋಪಿಗಳನ್ನು ಚಂಚಲ್‌ಗುಡಾ ಜೈಲಿನಲ್ಲಿಡಲಾಗಿದೆ.

ಸತ್ಯಂ ಸಂಸ್ಥಾಪಕ ರಾಮಲಿಂಗಾರಾಜು ಅವರನ್ನು ಬಹುಕೋಟಿ ವಂಚನೆ ಹಗರಣದ ಹಿನ್ನೆಲೆಯಲ್ಲಿ ಜನೆವರಿ ತಿಂಗಳಲ್ಲಿ ಬಂಧಿಸಿದ ನಂತರ ನಾಲ್ಕನೇ ಬಾರಿಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೊಬೈಲ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಿ: ಕಿಂಗ್‌ಫಿಶರ್
ಬ್ಯಾಂಕ್‌ಗಳಿಂದ ಮತ್ತಷ್ಟು ಬಡ್ಡಿ ದರ ಕಡಿತ ಸಾಧ್ಯತೆ?
ಆರ್ಥಿಕಾಭಿವೃದ್ಧಿಗೆ ಪ್ರಥಮ ಆದ್ಯತೆ: ಪ್ರಣಬ್
ಟಿಸಿಎಸ್‌ ಸಿಇಒ ಸ್ಥಾನಕ್ಕೆ ಚಂದ್ರಶೇಖರನ್ ನೇಮಕ
ಕಾಮನ್‌ವೆಲ್ತ್ ಗೇಮ್ಸ್: ಹೋಟೆಲ್ ಉದ್ಯಮಕ್ಕೆ ಶುಕ್ರದೆಸೆ
ಟಾಟಾ ಕಮ್ಯೂನಿಕೇಶನ್ಸ್‌‌ಗೆ 302.3ಕೋಟಿ ನಿವ್ವಳ ಲಾಭ